ಕೆಎಎಸ್ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಡಾ. ರವಿ ಎಂ. ತಿರ್ಲಾಪೂರ ಆಯ್ಕೆ

Public TV
1 Min Read

ಬೆಂಗಳೂರು: ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಡಾ. ರವಿ ಎಂ. ತಿರ್ಲಾಪೂರ ಆಯ್ಕೆಯಾಗಿದ್ದಾರೆ.

ಇಂದು ನಡೆದ ಕೆಎಎಸ್ ಅಧಿಕಾರಿಗಳ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಸಂಘದ ಉಪಾಧ್ಯಕ್ಷರಾಗಿ ಎಂ.ಕೆ ಜಗದೀಶ್, ಕಾರ್ಯದರ್ಶಿಯಾಗಿ ಡಾ. ಬಿ. ಆರ್ ಹರೀಶ್ ನಾಯ್ಕ್, ಜಂಟಿ ಕಾರ್ಯದರ್ಶಿಯಾಗಿ ಡಾ. ನಾಗೇಂದ್ರ ಎಫ್ ಹಿನ್ನಳ್ಳಿ, ಖಜಾಂಚಿಯಾಗಿ ಡಾ. ಸಂತೋಷ್ ಬಿರಾದಾರ ಇವರನ್ನು ಸೂಚಿಸಲಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಪ್ರವಾಸಿಗರಿಗೆ ಅಪಘಾತ – ಸಂತ್ರಸ್ತರ ನೆರವಿಗೆ ಯೋಗಿ ಜೊತೆ ಬೊಮ್ಮಾಯಿ ಮಾತುಕತೆ

ಕಾರ್ಯಕಾರಿ ಸಮಿತಿ ಸದ್ಯರಾಗಿ ಎನ್ ಮಹೇಶ್ ಬಾಬು, ಬಿ. ಎನ್ ವರಪ್ರಸಾದ್ ರೆಡ್ಡಿ, ಹೆಚ್. ಆರ್ ಶಿವಕುಮಾರ್, ಎಸ್.ಎಂ ಆಶಾ ಪರ್ವಿನ್, ಶ್ರೀಪಾದ್ ಎಸ್.ಬಿ, ಎಲಿಷ ಆಂಡ್ರೂಸ್, ಎಂ.ಎಸ್ ಎನ್ ಬಾಬು, ಸಿ.ಎನ್ ಮಂಜುನಾಥ್, ಬಸವರಾಜ್ ಆರ್ ಸೋಮಣ್ಣನವರ್, ಶೈಲಜಾ ಪ್ರಿಯದರ್ಶಿನಿ, ಬಿ.ಸಿ ಶಿವಾನಂದ ಮೂರ್ತಿ, ಸಿ.ಎಲ್ ಶಿವಕುಮಾರ್, ವಿ. ಸೋಮಶೇಖರ್, ಡಾ. ಮಧು ಎನ್.ಎನ್, ನಾಗ ಪ್ರಶಾಂತ್, ಕುನಾಲ್ ಕೆ, ಸ್ವಾಮಿ ಬಿ.ಎನ್ ಹಾಗೂ ಲೋಕೇಶ್ ಕೆ.ಎನ್ ಆಯ್ಕೆಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *