ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ನೆನಪು

Public TV
1 Min Read

ಬೆಂಗಳೂರು: ದಕ್ಷಿಣ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಕೊಡಲಾಗುವ ಪ್ರತಿಷ್ಠಿತ ಸೈಮಾ ಅವಾರ್ಡ್ (SIIMA Award) ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ನಿನ್ನೆ ಮತ್ತು ಇಂದು ಎರಡು ದಿನಗಳು ಜಯಮಹಲ್ ಪ್ಯಾಲೇಸ್‍ (Jayamahal Palace) ನಲ್ಲಿ ನಡೆಯುತ್ತಿದೆ. ವಿಶೇಷ ಅಂದ್ರೆ ಕಾರ್ಯಕ್ರಮ ಅಗಲಿದ ಕರ್ನಾಟರ ರತ್ನ ಅಪ್ಪು ಹೆಸರಲ್ಲಿ ನಡೆಯುತ್ತಿದೆ.

ಚಿತ್ರರಂಗ ಕಲರ್‍ಫುಲ್ ಪ್ರಶಸ್ತಿ ಪ್ರದಾನ ಸಮಾರಂಭ ಸೈಮಾಗೆ ಈ ಬಾರಿ ಬೆಂಗಳೂರು (Bengaluru) ಸಾಕ್ಷಿ ಆಗಿದೆ. ನಿನ್ನೆ ಕನ್ನಡ ಸಿನಿಮಾ ಇಂಡಸ್ಟ್ರಿ (Kannada Film Industry) ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಗೆ (Telugu Film Industry) ಸಂಬಂಧ ಪಟ್ಟ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಕಳೆದ ಹತ್ತು ವರ್ಷಗಳಲ್ಲಿ ಇದೀಗ ಮೊದಲ ಬಾರಿಗೆ ಸೈಮಾ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅದೂ ಪವರ್ ಸ್ಟಾರ್ (Power Star) ಡಾ.ಪುನೀತ್ ರಾಜ್‍ಕುಮಾರ್ (Dr. Puneeth RajKumar) ಹೆಸರಲ್ಲಿ ನಡೆಯುತ್ತಿದ್ದು, ಅಪ್ಪುಗೆ ಅರ್ಪಣೆಯಾಗಿದೆ.

ಕನ್ನಡ ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯ ತಾರೆಗಳು ತಂತ್ರಜ್ಞರು ಒಟ್ಟಿಗೆ ಸೇರಿದ್ರು. ತೆಲುಗು ನಟ ರಾಣಾ ದಗ್ಗುಬಾಟಿ (Rana daggubati) ಅಗಲಿದ ಗೆಳೆಯ ಅಪ್ಪುವನ್ನ ನೆನಪುಮಾಡಿಕೊಂಡ್ರು. ಅಲ್ಲದೇ ಶಿವಣ್ಣ (Dr. Shivaraj Kumar) ಸಹ ಅಪ್ಪುವನ್ನು ನೆನೆದು ಅಪ್ಪು ಎಲ್ಲೂ ಹೋಗಿಲ್ಲ ಅಂತಂದ್ರು. ಕನ್ನಡದ ಹಲವು ನಟ ನಟಿಯರು ಸುಂದರ ಸಂಜೆಗೆ ಮೆರುಗು ತಂದ್ರು. ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ, ಶುಭ್ರಾ ಅಯ್ಯಪ್ಪ ಸೇರಿ ಹಲವು ನಾಯಕಿಯರು ಕಲರ್ ಕಲರ್ ಗೌನ್ ತೊಟ್ಟು ರೆಡ್‍ಕಾರ್ಪೇಟ್ ಮೇಲೆ ಬೆಕ್ಕಿನ ನಡಿಗೆಯಲ್ಲಿ ನಡೆದು ಬೀಗಿದ್ರು.

ದಕ್ಷಿಣದ ನಾಲ್ಕು ಸಿನಿಮಾ ಇಂಡಸ್ಟ್ರಿಯಲ್ಲಿ ಒಗ್ಗೂಡಿಸಿ ಪ್ರಶಸ್ತಿ ನೀಡುವ ಸೈಮಾ ಮೊದಲ ಬಾರಿ ಕರ್ನಾಟಕದ ಬೆಂಗಳೂರಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *