ಅಲ್ಪಸಂಖ್ಯಾತ ಸೋದರರೇ ವ್ಯೂಹದಲ್ಲಿ ಸಿಲುಕಬೇಡಿ- ದೀದಿ ಹೇಳಿಕೆಗೆ ಓವೈಸಿ ತಿರುಗೇಟು

Public TV
1 Min Read

-ಬಿಜೆಪಿಯಿಂದ ಹಣ ಪಡೆದ್ರಾ ಓವೈಸಿ!
-42ರಲ್ಲಿ 18 ಬಿಜೆಪಿ ಗೆದ್ದಿದ್ದೇಗೆ?

ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವೆ ಮಾತಿನ ಚಕಮಕಿ ಆರಂಭಗೊಂಡಿದೆ. ಸೋಮವಾರ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಗೆ ಓವೈಸಿ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?
ಸೋಮವಾರ ಮಮತಾ ಬ್ಯಾನರ್ಜಿ ಕೂಚ್ ಬೆಹರ್ ನಲ್ಲಿರುವ ಮದನ ಮೋಹನ ದೇವಾಲಯಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಹೈದರಾಬಾದ್ ನಲ್ಲಿ ಹಿಂದೂ ವಿರೋಧಿ ಪಕ್ಷ ಒಂದಿದೆ. ಅವರು ಬಿಜೆಪಿಯಿಂದ ಹಣ ಪಡೆದು ಇಲ್ಲಿಗೆ ಬಂದು ಅಲ್ಪಸಂಖ್ಯಾತರನ್ನು ರಕ್ಷಿಸುತ್ತೇವೆ ಎಂದು ಹೇಳ್ತಾರೆ. ಅಲ್ಪಸಂಖ್ಯಾತ ಸೋದರರು ಅವರ ಮೋಸದ ವ್ಯೂಹದಲ್ಲಿ ಸಿಲುಕಬೇಡಿ ಎಂದು ಹೇಳಿದ್ದರು.

ಓವೈಸಿ ತಿರುಗೇಟು:
ಪಶ್ಚಿಮ ಬಂಗಾಳದಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ಸೂಚಂಕ್ಯ ಕಡಿಮೆ ಇದೆ ಎಂದು ಹೇಳುವುದು ಧರ್ಮಾಂಧತೆ ಅಲ್ಲ. ದೀದಿ ಹೈದರಾಬಾದಿಗಳ ಬಗ್ಗೆ ಚಿಂತಿತರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೇಗೆ 42ರ ಪೈಕಿ 18 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು ಎಂಬುದಕ್ಕೆ ಉತ್ತರಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *