ನೀರು ಕುಡಿಯಲು ಹೋಗಿ ಕೊಡದಲ್ಲಿ ಕತ್ತು ಸಿಲುಕಿಸಿಕೊಂಡ ನಾಯಿ

Public TV
0 Min Read

ಕೊಪ್ಪಳ: ನಾಯಿಯೊಂದು ನೀರು ಕುಡಿಯಲು ಹೋಗಿ ತನ್ನ ಕತ್ತನ್ನು ಕೊಡದಲ್ಲಿ ಸಿಲುಕಿಸಿಕೊಂಡು ಬಳಿಕ ಗ್ರಾಮಸ್ಥರು ಹರಸಾಹಸಪಟ್ಟು ಕತ್ತಿನಿಂದ ಕೊಡ ಬೇರ್ಪಡಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

ತಾಲೂಕಿನ ಮುದೇನೂರ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ ನಾಯಿ ನೀರು ಕುಡಿಯಲು ಪ್ಲಾಸ್ಟಿಕ್ ಕೊಡದಲ್ಲಿ ಇಣುಕಿದೆ. ಆದರೆ ಕತ್ತು ಅದರಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಹೊರಗೆ ತೆಗೆಯಲು ಓಡಾಡಿದೆ. ಆಗ ಇದನ್ನ ಗಮನಿಸಿದ ಗ್ರಾಮಸ್ಥರು ಹರಸಾಹಸ ಪಟ್ಟು ಕೊಡದಿಂದ ಕತ್ತು ಬೇರ್ಪಡಿಸಿದ್ದಾರೆ.

ಬಳಿಕ ಆ ನಾಯಿ ಬದುಕಿದೆ ಬಡಜೀವ ಎಂದು ನಿಟ್ಟುಸಿರು ಬಿಟ್ಟಿದೆ. ನಾಯಿಯ ಚಡಪಡಿಕೆಯನ್ನ ಕಂಡು ಮಮ್ಮಲ ಮರಗಿದ ಗ್ರಾಮಸ್ಥರು ಅಪಾಯದಿಂದ ಪಾರು ಮಾಡಿ ಮಾನವೀಯತೆ ತೋರಿದ್ದಾರೆ.

https://www.youtube.com/watch?v=LVImoisdmyQ

Share This Article
Leave a Comment

Leave a Reply

Your email address will not be published. Required fields are marked *