ಹುಚ್ಚು ನಾಯಿ ಕಡಿತ – 4 ಮಕ್ಕಳು ಸೇರಿ 15ಕ್ಕೂ ಹೆಚ್ಚು ಮಂದಿಗೆ ಗಾಯ

Public TV
1 Min Read

ಸಾಂದರ್ಭಿಕ ಚಿತ್ರ

ಮೈಸೂರು: ಒಂದೇ ಹುಚ್ಚು ನಾಯಿ 15ಕ್ಕೂ ಹೆಚ್ಚು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಮೈಸೂರು ಗ್ರಾಮಾಂತರ ಭಾಗದ ಪಿಲ್ಲಳ್ಳಿ, ವರಕೂಡು, ಮೂಡಲಹುಂಡಿ ಗ್ರಾಮಗಳಲ್ಲಿ ನಡೆದಿದೆ.

ಮಾಕೇಗೌಡ (45) ಪುಟ್ಟೇಗೌಡ (40), ಪ್ರೀತಂ (8), ಪ್ರೀತಿ (6), ಶೋಭಾ (9), ಯಶೋಧಾ (8) ಎಂಬವರಿಗೆ ಘಟನೆಯಲ್ಲಿ ಗಂಭೀರ ಗಾಯವಾಗಿದ್ದು, ಮೈಸೂರಿನ ಕೆ.ಆರ್ ಆಸ್ಪತ್ರೆ ಹಾಗೂ ಜಿಲ್ಲಾ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಪಿಲ್ಲಹಳ್ಳಿ ಗ್ರಾಮಕ್ಕೆ ಪ್ರವೇಶದ ಮಾಡಿದ್ದ ಹುಚ್ಚು ನಾಯಿ ಗ್ರಾಮದ ಕೆಲ ಜನರಿಗೆ ಕಚ್ಚಿ ಗಾಯಗೊಳಿಸಿದ್ದು. ಬಳಿಕ ಅಕ್ಕ ಪಕ್ಕದ ಗ್ರಾಮಗಳಾದ ವರಕೂಡು, ಮೂಡಲಹುಂಡಿ ಹಳ್ಳಿಯಲ್ಲೂ ಇದೇ ನಾಯಿ ದಾಳಿ ನಡೆಸಿದೆ.

ಮುಖ್ಯವಾಗಿ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೂ ನಾಯಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಸದ್ಯ ಈ ಪ್ರದೇಶದ ಗ್ರಾಮಸ್ಥರು ಹುಚ್ಚು ನಾಯಿ ದಾಳಿಯಿಂದ ಕಂಗಾಲಾಗಿದ್ದಾರೆ.

ಇತ್ತ ದಾವಣಗೆರೆಯಲ್ಲೂ ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದು, 10 ವರ್ಷದ ಹುಸ್ಮಾ ಗಂಭೀರವಾಗಿ ಗಾಯಗೊಂಡಿದ್ದಾಳೆ. ಜಿಲ್ಲೆಯ ಹರಿಹರ ಪಟ್ಟಣದ ಬಾಹಿರ್ ಮಖಾನ್ ಎಂಬಲ್ಲಿ ಘಟನೆ ನಡೆದಿದ್ದು, ಮನೆ ಮುಂಭಾಗ ಆಟವಾಡುವಾಗ ದಾಳಿ ನಡೆದಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *