ಮೂರು ಹಲ್ಲು ಕಿತ್ತು ಸಾವು ಕರುಣಿಸಿದ ಹುಬ್ಬಳ್ಳಿ ವೈದ್ಯ !

Public TV
1 Min Read

– ಹುಬ್ಬಳ್ಳಿಯ ಡಾಕ್ಟರ್ ವಿರುದ್ಧ ಆಕ್ರೋಶ

ಹುಬ್ಬಳ್ಳಿ: ವೈದ್ಯರ ಯಡವಟ್ಟಿನಿಂದಾಗಿ ರೋಗಿ ತನ್ನ ಜೀವವನ್ನೇ ಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಅಬ್ದುಲ್ ಖಾದರ್ ಸಾವನ್ನಪ್ಪಿದ ರೋಗಿ. ಹುಬ್ಬಳ್ಳಿಯ ರತ್ನಾ ಡೆಂಟಲ್ ಕ್ಲಿನಿಕ್ ವೈದ್ಯ ವಿರೇಶ್ ಮಾಗಳದ್ ಅವರ ಯಡವಟ್ಟಿನಿಂದಾಗಿ ಅಬ್ದುಲ್ ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಹಲ್ಲು ನೋವು ಎಂದು ಆಸ್ಪತ್ರೆಗೆ ಹೋದ ಅಬ್ದುಲ್ ಅವರ ಮೂರು ಹಲ್ಲುಗಳನ್ನು ವೈದ್ಯರು ಕಿತ್ತಿದ್ದಾರೆ. ಅಷ್ಟೇ ಅಲ್ಲದೇ ಸಮರ್ಪಕ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿತ್ತು.

ಅಬ್ದುಲ್ ಖಾದರ್ ತೀವ್ರ ರಕ್ತ ಸ್ರಾವದಿಂದ ಪ್ರಜ್ಞೆ ಹೀನ ಸ್ಥಿತಿಗೆ ಹೋಗಿದ್ದರು. ಕೋಮಾ ಸ್ಥಿತಿಯಲ್ಲಿದ್ದ ಅಬ್ದುಲ್ ರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಐದು ದಿನಗಳ ಜೀವನ್ಮರಣದ ಹೋರಾಟ ನಡೆಸಿ ರೋಗಿ ಅಬ್ದುಲ್ ಜೀವ ಬಿಟ್ಟಿದ್ದಾರೆ.

ಸದ್ಯ ವೈದ್ಯರ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *