ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ

Public TV
1 Min Read

ತುಮಕೂರು: ಅಕ್ರಮ ಹಣ ವರ್ಗಾವಣೆಯ ಆರೋಪದ ಮೇಲೆ ಇಡಿ ಅಧಿಕಾರಿಗಳ ಕೈಗೆ ಸಿಲುಕಿ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜಾಮೀನಿನ ಮೇಲೆ ಹೊರಬಂದು ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಇಂದು ಟೆಂಪಲ್ ರನ್ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಇಷ್ಟ ದೈವ ಅಜ್ಜಯ್ಯನ ದರ್ಶನ ಮಾಡಿದ್ದಾರೆ.

ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ ಅಲ್ಲಿಂದ  ನೇರವಾಗಿ ಹೊರಟು ತುಮಕೂರಿನ ತಿಪಟೂರಿನಲ್ಲಿರುವ ನೊಣವಿನ ಕೆರೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಗುರುಭವನದಲ್ಲಿ ಶಿವಯೋಗೀಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿದ್ದು, ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲಿಂದ ಅಜ್ಜಯ್ಯನ ದರ್ಶನ ಮಾಡುಲು ತೆರಳಿದ್ದರು. ಈ ವೇಳೆ ಅಭಿಮಾನಿಗಳು ಡಿಕೆಶಿಯನ್ನು ಸುತ್ತುವರಿದಿದ್ದರು. ಇದನ್ನೂ ಓದಿ: ಎಲ್ಲರ ಕಮೆಂಟ್‍ಗಳಿಗೆ ಮುಂದೆ ಉತ್ತರಿಸುತ್ತೇನೆ: ಡಿಕೆಶಿ

ಸುಮಾರು 20 ನಿಮಿಷಗಳ ಕಾಲ ಅಜ್ಜಯ್ಯನ ಪೀಠಕ್ಕೆ ವಿಶೇಷವಾಗಿ ಪೂಜೆ ಮಾಡಿಸಿದ್ದಾರೆ. ಡಿಕೆಶಿ ಮತ್ತು ಸಹೋದರ ಸುರೇಶ್ ಅವರಿಗೆ ಮಾತ್ರ ಗರ್ಭ ಗುಡಿಗೆ ಪ್ರವೇಶ ನೀಡಲಾಗಿತ್ತು. ಶ್ರೀಮಠದ ಕರಿಬಸವ ದೇಶಿಕೇಂದ್ರ ಶಿವಯೋಗೇಶ್ವರ್ ಸ್ವಾಮೀಜಿ ನೇತೃತ್ವದಲ್ಲಿ ಅಜ್ಜಯ್ಯನ ಪೀಠಕ್ಕೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *