ವಿಧಾನಸಭೆಯಲ್ಲಿ RSS ಗೀತೆ ಹಾಡಿ ಗಮನ ಸೆಳೆದ ಡಿಕೆಶಿ – ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ

Public TV
2 Min Read

– ಗಾಂಧಿ ಕುಟುಂಬ ಬಿಟ್ಟು ದೇಶದ 140 ಕೋಟಿ ಜನ RSS ಗೌರವಿಸ್ತಾರೆ
– ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಟಾಂಗ್‌

ಬೆಂಗಳೂರು: ʻನಮಸ್ತೇ ಸದಾ ವತ್ಸಲೇ ಮಾತೃಭೂಮೇʼ ಅಂತ ಆರ್‌ಎಸ್‌ಎಸ್‌ (RSS) ಗೀತೆಯನ್ನು ವಿಧಾನಸಭೆಯಲ್ಲಿ ಹಾಡುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಗಮನ ಸೆಳೆದಿದ್ದಾರೆ.

ಆ.21ರಂದು ವಿಧಾನಸಭೆಯಲ್ಲಿ (Vishan Sabha) ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ವಿಚಾರದ ಚರ್ಚೆ ನಡೆಯುತ್ತಿತ್ತು. ಈ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಉತ್ತರ ನೀಡಿದರು. ಇದೇ ವೇಳೆ ವಿಪಕ್ಷ ನಾಯಕ ಆರ್‌. ಅಶೋಕ್, ಆರ್‌​ ಸಿಬಿ ಗೆಲುವಿನಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಎದ್ದು ನಿಂತ ಡಿಕೆಶಿ, ನಾನು ಕ್ರಿಕೆಟ್ ಅಭಿಮಾನಿ, ಕೆಎಸ್‌ಸಿಎ ಸದಸ್ಯ, ಕ್ರೀಡಾಂಗಣಕ್ಕೆ ಹೋಗಿದ್ದೆ. ಕಪ್‌ಗೂ ಮುತ್ತು ಕೊಟ್ಟಿದ್ದೆ ಎಂದರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ – ಕೇಂದ್ರ ಮಧ್ಯಸ್ಥಿಕೆ ವಹಿಸುವಂತೆ ಅಮಿತ್ ಶಾಗೆ ಪತ್ರ ಸ್ವಾಮೀಜಿಗಳಿಂದ ಪತ್ರ

ಈ ವೇಳೆ ಆರ್‌ಎಸ್‌ಎಸ್‌ ಚಡ್ಡಿ ಹಾಕಿದ್ರಲ್ಲ ಅಂತ ಅಶೋಕ್ ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಡಿಕೆಶಿ, ʻನಮಸ್ತೇ ಸದಾ ವತ್ಸಲೇ ಮಾತೃಭೂಮೇʼ ಗೀತೆಯನ್ನು ಹಾಡಿ, ಈಗ ಅದೆಲ್ಲ ಚರ್ಚೆ ಬೇಡ ಅಂತ ಟಕ್ಕರ್‌ ಕೊಟ್ಟರು. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್‌ ಪ್ರಚಾರಕ್ಕೆ 48.88 ಕೋಟಿ – ತಮನ್ನಾಗೆ 6.20 ಕೋಟಿ, ಯಾರಿಗೆ ಎಷ್ಟು?

ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ
ಇದೀಗ ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಟಕ್ಕರ್‌ ಕೊಟ್ಟಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಡಿಕೆಶಿ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಕಾಂಗ್ರೆಸ್ ನಲ್ಲಿರುವ ಪ್ರತಿಯೊಬ್ಬ ನಾಯಕರು ಆರ್‌ಎಸ್‌ಎಸ್ ಅನ್ನು ಗೌರವಿಸುತ್ತಾರೆ. ಆರ್‌ಎಸ್‌ಎಸ್‌ನ ಸಮಾಜಮುಖ ಕೆಲಸ ಗೊತ್ತಿದೆ. ಹೀಗಾಗಿ ಅವರು ಆರ್‌ಎಸ್‌ಎಸ್ ಗೌರವಿಸುತ್ತಾರೆ. ರಾಹುಲ್ ಗಾಂಧಿಯನ್ನು ಯಾರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಡಿಕೆ ಶಿವಕುಮಾರ್ ಕೂಡ ತಮಾಷೆಯಾಗಿ ಹೇಳಿರಬಹುದು. ಕಾಂಗ್ರೆಸ್‌ನಲ್ಲಿ ಮುಂದುವರಿಯಬೇಕಿರುವ ಕಾರಣ ಅವರು ಉದ್ದೇಶಪೂರ್ವಕವಾಗಿ ತಮಾಷೆಯಾಗಿ ಹೇಳಿರಬಹುದು. ಗಾಂಧಿ ಕುಟುಂಬ ಬಿಟ್ಟು ದೇಶದ 140 ಕೋಟಿ ಜನರು ಆರ್‌ಎಸ್‌ಎಸ್ ಗೌರವಿಸುತ್ತಾರೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮನೆ ಖಾಲಿ ಮಾಡೋದಾಗಿ ಹೇಳಿದ್ದಾರಂತೆ ಸಮೀರ್‌

Share This Article