ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು

Public TV
1 Min Read

ಬೆಂಗಳೂರು: ದೀಪಾವಳಿ (Diwali) ಹಿನ್ನೆಲೆ ಪಟಾಕಿ (Firecrackers) ಸಿಡಿಸಲು ಹೋಗಿ ಅನಾಹುತ ಸಂಭವಿಸಿ ನಾರಾಯಣ ನೇತ್ರಾಲಯದಲ್ಲಿ (Narayana Nethralaya) ಒಟ್ಟು 20 ಪ್ರಕರಣಗಳು ದಾಖಲಾಗಿವೆ.

ನಾರಾಯಣ ನೇತ್ರಾಲಯದಲ್ಲಿ ಸೋಮವಾರ 5 ಕೇಸ್ ದಾಖಲಾಗಿತ್ತು. ತಡರಾತ್ರಿ 15 ಕೇಸ್ ದಾಖಲಾಗಿದೆ. ಪಟಾಕಿ ಸಿಡಿಸಲು ಹೋಗಿ ಮಕ್ಕಳು ಗಾಯಗೊಂಡಿದ್ದಾರೆ. ಇನ್ನು ಪಟಾಕಿಯಿಂದ ಅನಾಹುತ ಸಂಭವಿಸಿದ ಪರಿಣಾಮ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: Chitradurga | ಪೋಷಕರಿಗೆ ಕರೆ ಮಾಡಿ ಮಾತನಾಡಿದ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕನಿಂದ ಹಲ್ಲೆ – ವೀಡಿಯೋ ವೈರಲ್

ದೀಪಾವಳಿ ಸಂಭ್ರಮ ವೇಳೆ ಪಟಾಕಿ ಹೊಡೆಯುವಾಗ ಹುಷಾರಾಗಿ ಅಂತ ನೇತ್ರಾ ತಜ್ಞರು ಸಲಹೆ ಮಾಡಿದ್ದಾರೆ. ಒಂದು ವೇಳೆ, ಪಟಾಕಿ ಸಿಡಿತದಿಂದ ಕಣ್ಣೆಗೆ ಹಾನಿಯಾದ್ರೆ, ಈ ಕೆಳಗಿನ ನಿಯಮಗಳನ್ನು ಪಾಲಿಸಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ Vs ಆರ್‌ಜೆಡಿ Vs ಸಿಪಿಐ Vs ಜೆಎಂಎಂ ಮಧ್ಯೆ ಬಿಹಾರದಲ್ಲಿ ಕುಸ್ತಿ

ವೈದ್ಯರು ಕೊಟ್ಟಿರೋ ಸಲಹೆಗಳೇನು?
– ಕೋಲ್ಡ್, ಸ್ವಚ್ಛ ನೀರಿನಿಂದ ಕಣ್ಣನ್ನು ಸ್ವಚ್ಛಗೊಳಿಸಿ
– ಕಣ್ಣನ್ನು ಕೈಯಿಂದ ಉಜ್ಜಿಕೊಳ್ಳಬೇಡಿ
– ತಕ್ಷಣ ನೇತ್ರ ತಜ್ಞರನ್ನು ಭೇಟಿ ಮಾಡಿ
ಕಣ್ಣು ಸೂಕ್ಷ್ಮವಾಗಿರುವುದರಿಂದ ಗಾಯವಾದ್ರೂ ನಿರ್ಲಕ್ಷಿಸಬೇಡಿ ಎಂದು ನಾರಾಯಣ ನೇತ್ರಾಲಯ ನಿರ್ದೇಶಕ ಡಾ. ನರೇನ್ ಶೆಟ್ಟಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬ | ಪಟ್ಟಕ್ಕಾಗಿ ಕೈ ಶಾಸಕರಿಂದ ಎರಡೂ ಪವರ್ ಸೆಂಟರ್ ಬ್ಯಾಲೆನ್ಸ್‌!

Share This Article