ಉಡುಪಿಯ ಎಂಐಟಿ ಕಾಲೇಜಿಗೆ ನಿರ್ದೇಶಕ ರಾಜಮೌಳಿ ಭೇಟಿ ನೀಡಿ ಹೀಗಂದ್ರು

Public TV
1 Min Read

ಉಡುಪಿ: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಶುಕ್ರವಾರ ಉಡುಪಿಗೆ ಭೇಟಿ ನೀಡಿದ್ದಾರೆ.

ಜಿಲ್ಲೆಯಲ್ಲಿರೋ ಮಣಿಪಾಲ್ ತಾಂತ್ರಿಕ ಶಿಕ್ಷಣ ಸಂಸ್ಥೆ (ಎಂಐಟಿ) ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಜಮೌಳಿ ಪಾಲ್ಗೊಂಡಿದ್ದರು. ಶಿಕ್ಷಣ ಸಂಸ್ಥೆಯಿಂದ ಅವರಿಗೆ ಅದ್ಧೂರಿ ಸ್ವಾಗತವೇ ಸಿಕ್ಕಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಸಂತಸದಿಂದ ಉತ್ತರಿಸುತ್ತಾ ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ನಿರ್ದೇಶಕರಿಗೆ ಹೀರೋಗಳಿಗೆ ಸೂಕ್ತವಾಗುವ ಕಥೆ ಮಾಡುವ ಅನಿವಾರ್ಯತೆ ಇರುತ್ತದೆ. ಆದರೆ ಕಥೆಗೆ ತಕ್ಕಂತ ಹೀರೋಗಳನ್ನು ಆಯ್ಕೆ ಮಾಡುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಕೆಲವೇ ಕೆಲವು ಡೈರೆಕ್ಟರ್‍ಗಳಿಗೆ ಮಾತ್ರ ಅಂತಹ ಅವಕಾಶ ಸಿಗುತ್ತದೆ. ಆದರೆ ನಾನು ಅದೃಷ್ಟವಂತ ನಿರ್ದೇಶಕ ಅಂತ ಹೇಳಿದ್ರು.

ಸಂವಾದ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಡ್ಯಾನ್ಸ್ ಪ್ರೇಕ್ಷಕರ ಗಮನ ಸೆಳೆಯಿತು.

Share This Article
Leave a Comment

Leave a Reply

Your email address will not be published. Required fields are marked *