‘ಮಂತ್ರ ಮಾಂಗಲ್ಯ’ ಮದುವೆ ಮೂಲಕ ಮಾದರಿಯಾದ ನಿರ್ದೇಶಕ ಕೆ.ಎಂ. ರಘು

Public TV
1 Min Read

ರಸಂಗ, ತರ್ಲೆ ವಿಲೇಜ್ , ದೊಡ್ಡಹಟ್ಟಿ ಬೋರೇಗೌಡ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ಎಂ.ರಘು ನಿನ್ನೆ ಮೈಸೂರಿನ ಕುಮಾರಬೀಡುವಿನಲ್ಲಿ ಕೆ.ಆರ್.ಆಶಾ ಜೊತೆ ಸಪ್ತಪದಿ ತುಳಿದಿದ್ದಾರೆ. ತಮ್ಮ ಆಶಯದಂತೆ ಅವರು ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

ಬೆಂಗಳೂರಿ ನಿವಾಸಿ ಕೆ.ಆರ್. ಆಶಾ ಅವರ ಜೊತೆ ನಿನ್ನೆ (ಮೇ 29) ಮಂತ್ರ ಮಾಂಗಲ್ಯ ಮಾಡಿಕೊಂಡಿರುವ ರಘುವಿಗೆ ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಂತ್ರ ಮಾಂಗಲ್ಯ ಬೋಧನೆ ಮಾಡಿಸಿದರೆ, ಎರಡು ಕುಟುಂಬ ಸದಸ್ಯರು ಮತ್ತು ಆಪ್ತರು ಈ ಸರಳ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

ಬೆಂಗಳೂರಿನ ಪಿಇಎಸ್ ಕಾಲೇಜು ಉಪನ್ಯಾಸಕಿ ಆಗಿರುವ ಆಶಾ ಕೂಡ ಕುವೆಂಪು ಅವರ ತತ್ವಗಳಲ್ಲಿ ನಂಬಿಕೆ ಇಟ್ಟವರು. ಹಾಗಾಗಿ ರಘು ಮತ್ತು ಆಶಾ ತಮ್ಮ ಕುಟುಂಬಗಳನ್ನು ಒಪ್ಪಿಸಿ, ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ. ಖುಷಿಯಿಂದಲೇ ಎರಡು ಕುಟುಂಬಗಳು ಸತಿಪತಿಗೆ ಹಾರೈಸಿ, ಆಶೀರ್ವದಿಸಿದ್ದಾರೆ.

ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿರುವ ರಘು, ಈ ವರ್ಷ ಬೆಂಗಳೂರಿನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದೊಡ್ಡ ಹಟ್ಟಿ ಬೋರೇಗೌಡ ಚಿತ್ರಕ್ಕಾಗಿ ಪ್ರಶಸ್ತಿ ಕೂಡ ಪಡೆದಿದದ್ಆರೆ. ಪರಸಂಗ ಮತ್ತು ತರ್ಲೆ ವಿಲೇಜ್ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿವೆ.

Share This Article
Leave a Comment

Leave a Reply

Your email address will not be published. Required fields are marked *