ನಿರ್ದೇಶಕ ಭಗವಾನ್ ಅವರ ಕೊನೆ ಆಸೆ ಈಡೇರಿಸುವೆ : ನಟ ರಾಘವೇಂದ್ರ ರಾಜಕುಮಾರ್

Public TV
1 Min Read

ಡಾ.ರಾಜಕುಮಾರ್ (Rajkumar) ನಟನೆಯ ಸೂಪರ್ ಹಿಟ್ ಸಿನಿಮಾಗಳ ಹಿಂದೆ ನಿರ್ದೇಶಕ ಭಗವಾನ್ (Bhagwan) ಅವರ ಶ್ರಮವೂ ಇದೆ. ವರನಟನಿಗಾಗಿಯೇ ಅವರು ವಿಶೇಷ ಕಥೆಗಳನ್ನು ಹುಡುಕುತ್ತಿದ್ದರು. ಅಥವಾ ವರದಪ್ಪನವರು ಹುಡುಕಿದ ಕಥೆಯನ್ನು ಇವರು ನಿರ್ದೇಶನ ಮಾಡುತ್ತಿದ್ದರು. ಹಾಗಾಗಿ ಅಣ್ಣಾವ್ರ ಕುಟುಂಬವು ಭಗವಾನ್ ಅವರನ್ನು ವಿಶೇಷ ಪ್ರೀತಿಯಿಂದ ಕಾಣುತ್ತಿತ್ತು. ಇಂದು ಭಗವಾನ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ರಾಘವೇಂದ್ರ ರಾಜ ಕುಮಾರ್ (Raghavendra Rajkumar) ಆ ಎಲ್ಲ ನೆನಪುಗಳನ್ನು ಹಂಚಿಕೊಂಡರು.

ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾಜಕುಮಾರ್, ‘ಭಗವಾನ್ ಮಾಮಗೆ ದೊಡ್ಡದೊಂದು ಕನಸಿತ್ತು. ಮಂತ್ರಾಲಯ ಮಹಾತ್ಮೆ (Mantralaya Mahatme) ಸಿನಿಮಾವನ್ನು ಕಲರ್ ಪ್ರಿಂಟ್ ಮಾಡಿಸಬೇಕು ಅಂತ. ಅದನ್ನು ನಾನು ಮಾಡಿಸುತ್ತೇನೆ. ಅಪ್ಪಾಜಿಯಂತೆ ಅವರು ಕೂಡ ಶಿಸ್ತಿನ ಮನುಷ್ಯ. ತಂದೆಯನ್ನು ಕಳೆದುಕೊಂಡಷ್ಟೇ ದುಃಖವಾಗಿದೆ’ ಎಂದರು. ಇದನ್ನೂ ಓದಿ: ಸಂಬಂಧಿಕರ ಮದುವೆಯಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್

1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದ ಭಗವಾನ್, ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *