ನನ್ನ ಮೇಲಿನ ಆರೋಪ ಸಾಬೀತು ಮಾಡ್ಲಿ, ಮಠದ ಗದ್ದುಗೆ ಎದುರೇ ಪ್ರಾಣ ಬಿಡ್ತೇನೆ: ದಿಂಗಾಲೇಶ್ವರ ಶ್ರೀ

Public TV
1 Min Read

ಧಾರವಾಡ: ದುಷ್ಕರ್ಮಿಗಳು ನಾನು ಗುಂಡಾ, ಅಯೋಗ್ಯ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಗುಂಡಾ, ಅಯೋಗ್ಯ ಆಗಿದ್ದರೆ ಅದನ್ನ ತುಂಬಿದ ಸಭೆಯಲ್ಲಿ ಸಾಬೀತು ಪಡಿಸಲಿ. ಆರೋಪವನ್ನ ಸಾಬೀತು ಮಾಡಿದರೇ ಮೂರುಸಾವಿರ ಮಠದ ಕರ್ತೃ ಗದ್ದುಗೆ ಎದುರೇ ಪ್ರಾಣ ಬಿಡುತ್ತೇನೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲ್ ಹಾಕಿದ್ದಾರೆ.

ಧಾರವಾಡ ಲಿಂಗಾಯತ ಭವನದಲ್ಲಿ ನಡೆದ ಭಕ್ತರ ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮೂರುಸಾವಿರ ಮಠದ ಗದ್ದುಗೆಗಾಗಿ ಸಭೆಗಳನ್ನು ಮಾಡುತ್ತಿಲ್ಲ. ಮಠಕ್ಕೆ ಸುತ್ತಿದ ವಿವಾದ ಬಗೆಹರಿಸಲು ಭಕ್ತರು ಸಭೆ ಮಾಡುತ್ತಿದ್ದೇನೆ ಎಂದರು. ನಾನು ಮೂರುಸಾವಿರ ಮಠದ ಜಗದ್ಗುರುಗಳನ್ನು ಭೇಟಿ ಮಾಡುತ್ತೇನೆ. ನಾವು ಮಠಕ್ಕೆ ಸ್ವಾಮೀಜಿಯಾಗಲು ಖಾವಿಧಾರಿಯಾಗಿಲ್ಲ, ಸಮಾಜಕ್ಕಾಗಿ ನಾವು ಖಾವಿಧಾರಿಯಾಗಿದ್ದೇವೆ. ಸ್ವಾಮೀತ್ವಕ್ಕೆ ಮಠವೇ ಬೇಕಾಗಿಲ್ಲ. ಆದರೆ ಈಗ ನನ್ನ ಗೌರವದ ಪ್ರಶ್ನೆ ಬಂದಿದೆ ಹೀಗಾಗಿ ನಾನು ಮುಂದೆ ಬಂದಿದ್ದೇನೆ ಎಂದು ಸಭೆಯಲ್ಲಿ ತಿಳಿಸಿದರು.

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೂ ಮತ್ತು ಮೂರುಸಾವಿರ ಮಠ ಜಗದ್ಗುಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಗುರು ನಾನು ಶಿಷ್ಯ. ಆದರೆ ಕೆಲವರು ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಂದಿಟ್ಟಿದ್ದಾರೆ. ಕೆಲವರ ರಾಜಕೀಯದಿಂದ ಹೀಗಾಗಿದೆ. ಅವರನ್ನು ಮಠದಿಂದ ದೂರ ಮಾಡಲು ಈಗ ಹೋರಾಟ ನಡೆದಿದೆ ಎಂದು ಕಿಡಿಕಾರಿದರು.

ನನ್ನ ಉತ್ತರಾಧಿಕಾರಿ ಪತ್ರ ಆದ ನಂತರದಲ್ಲಿ ಉಳಿದ ಚಟುವಟಿಕೆಗಳು ನಡೆದಿವೆ. ದಿಂಗಾಲೇಶ್ವರ ಸ್ವಾಮೀಜಿ ಬರಬೇಕು ಎಂದು ಭಕ್ತರು ಬಯಸಿದ್ದಾರೆ. ಆದರೆ ಕೆಲವರು ದಿಂಗಾಲೇಶ್ವರ ಸ್ವಾಮೀಜಿ ಬರಬಾರದು ಎಂದು ಕೆಟ್ಟ ಪ್ರಯತ್ನ ಮಾಡಿದ್ದಾರೆ. ನಾನು ಮಠಕ್ಕೆ ಅನ್ಯಾಯ ಮಾಡಿದ್ದರೆ, ದ್ರೋಹ ಮಾಡಿದ್ದರೆ ಸಾಬೀತು ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರ. ಹಾಗೆಯೇ ಮಠದಲ್ಲಿ ರಾಜಕೀಯ ಮಾಡುವವರನ್ನ ದೂರ ಮಾಡುತ್ತೇನೆ ಎಂದು ಸ್ವಾಮೀಜಿ ಹರಿಹಾಯ್ದರು.

Share This Article
Leave a Comment

Leave a Reply

Your email address will not be published. Required fields are marked *