ತೆಲಂಗಾಣದಲ್ಲೂ ನಟ, ನಟಿಯರು ಕಲಾವಿದರು ಡ್ರಗ್ಸ್ (Drugs) ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸುವ ನಿರ್ಣಯ ಕೈಗೊಳ್ಳುವ ದಿಟ್ಟ ನಿರ್ಧಾರ ಮಾಡಬೇಕು ಎಂದು ನಿರ್ಮಾಪಕ ದಿಲ್ರಾಜ್ (Dil Raju) ಒತ್ತಾಯಿಸಿದ್ರು.
“Following the example of the Malayalam film industry, the Telugu film industry aims to enforce a ban on drug-using artists and technicians.” pic.twitter.com/kI17l2szFG
— Gulte (@GulteOfficial) June 26, 2025
ವಿಶ್ವ ಮಾದಕ ವಸ್ತು ವಿರೋಧಿ ದಿನದ (Anti Drugs Day) ಅಂಗವಾಗಿ ಇಂದು ತೆಲಂಗಾಣ ಸರ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತೆಲುಗು ನಟರಾದ ರಾಮಚರಣ್, ವಿಜಯ ದೇವರಕೊಂಡ, ನಿರ್ಮಾಪಕ ದಿಲ್ರಾಜ್, ಗೋಪಿಚಂದ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಇದನ್ನೂ ಓದಿ: ಡ್ರಗ್ಸ್ ಸೇವನೆ: ನಟ ಶ್ರೀಕಾಂತ್ ಬಳಿಕ ಮತ್ತೋರ್ವ ನಟನ ಬಂಧನ
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ದಿಲ್ರಾಜ್ ಮಲಯಾಳಂ ಸಿನಿಮಾ ರಂಗದಲ್ಲಿ ನಟ, ನಟಿಯರು ಕಲಾವಿದರು ಡ್ರಗ್ಸ್ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸುವ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ತೆಲಂಗಾಣದಲ್ಲೂ ನಟ, ನಟಿಯರು ಕಲಾವಿದರು ಡ್ರಗ್ಸ್ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸುವ ನಿರ್ಣಯ ಕೈಗೊಳ್ಳುವ ದಿಟ್ಟ ನಿರ್ಧಾರ ಮಾಡಬೇಕು ಎಂದು ವೇದಿಕೆಯಲ್ಲೇ ಒತ್ತಾಯಿಸಿದ್ರು. ಇದನ್ನೂ ಓದಿ: ತಲೈವಾ ಭೇಟಿಯಾದ ಧನ್ಯಾ ರಾಮ್ಕುಮಾರ್.. ಯಾಕೆ ಗೊತ್ತೇನು ?
ಇದೇ ವೇಳೆ ಮಾತನಾಡಿದ ರಾಮ್ ಚರಣ್ (Ram Charan), ಒಬ್ಬ ತಂದೆಯಾಗಿ, ನೀವು ರಾಜ್ಯ, ನಗರ, ಶಾಲೆಗಳ ಬಗ್ಗೆ ಯೋಚಿಸಬೇಕು. ನಾಳೆ ನಿಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ಬಯಸಿದರೆ, ನೀವು ಈ ಎಲ್ಲಾ ವಿಷಯಗಳ ಬಗ್ಗೆ ಯೋಚಿಸಬೇಕು ಎಂದು ಜಾಗೃತಿ ಮೂಡಿಸಿದ್ರು. ಇದನ್ನೂ ಓದಿ: ಕಮಲ್ `ಥಗ್ಲೈಫ್’ಗೆ ಗಾಯದ ಮೇಲೆ ಬರೆ, 25 ಲಕ್ಷ ದಂಡ!
ಡ್ರಗ್ಸ್ ವಿಚಾರದಲ್ಲಿ ಯುವಕರು ಬಹಳ ಜಾಗರೂಕರಾಗಿರಬೇಕು. ಆರೋಗ್ಯ, ಹಣ, ಯಶಸ್ಸು, ಗೌರವ ಒಬ್ಬ ವ್ಯಕ್ತಿಗೆ ಬಹಳ ಮುಖ್ಯ. ಮಾದಕ ವಸ್ತುಗಳು ವ್ಯಕ್ತಿಯಿಂದ ಇವೆಲ್ಲವನ್ನೂ ಕಸಿದುಕೊಳ್ಳುತ್ತವೆ ಎಂದು ನಟ ವಿಜಯ್ ದೇವರಕೊಂಡ (Vijay Deverakonda) ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ರು. ಇದನ್ನೂ ಓದಿ: ಮ್ಯಾನೇಜರ್ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್