ಚಿಕ್ಕಬಳ್ಳಾಪುರ: ವಂಚಕರ ಪರವಾಗಿ ಪಿಎಸ್ಐಗೆ ಕರೆ ಮಾಡಿ ಸಚಿವ ಜಮೀರ್ ಅಹಮದ್ (Zameer Ahmed) ಪ್ರಭಾವ ಬೀರಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರದ ದಿಗೂರು ನಿವಾಸಿ, ಪಾಪ್ಕಾರ್ನ್ ವ್ಯಾಪಾರಿ ಡಿಎನ್ ರಾಮಕೃಷ್ಣ ಅನ್ನೋವ್ರು ತೆಲಂಗಾಣದ ಹೈದರಾಬಾದ್ ಮೂಲಕದ ಹೆಕೆಜಿಎನ್ ಮುಸ್ಕಾನ್ ಪಾಪ್ಕಾರ್ನ್ ಟ್ರೇಡರ್ಸ್ ಮಾಲೀಕರಾದ ಸೈಯದ್ ಅಬ್ದುಲ್ ರಜಾಕ್, ಸೈಯದ್ ಅಬ್ದುಲ್ ಅಕ್ಬರ್ಪಾಷ, ನಾಸಿರ್ ಅಹಮದ್ ಎನ್ನುವ ಮೂವರು ಸಹೋದರರಿಗೆ 1.89 ಕೋಟಿ ರೂ. ಮೌಲ್ಯದ ಪಾಪ್ಕಾರ್ನ್ ಜೋಳವನ್ನು ಸರಬರಾಜು ಮಾಡಿದ್ದಾರೆ.ಇದನ್ನೂ ಓದಿ: ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್
ಹೈದರಾಬಾದ್ನ ವ್ಯಾಪಾರಿಗಳು, ಖರೀದಿ ಮಾಡಿರುವ ಜೋಳದ ಹಣವನ್ನು ರಾಮಕೃಷ್ಣ ಅವರಿಗೆ ಕೊಟ್ಟಿಲ್ಲ. ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಗೆ ರಾಮಕೃಷ್ಣ ದೂರು ನೀಡಿದ್ದರು. ಆರೋಪಿ ಸಹೋದರರಲ್ಲಿ ಸೈಯದ್ ಅಬ್ದುಲ್ ಅಕ್ಬರ್ಪಾಷರನ್ನು ಬಂಧಿಸಿ ಪಿಎಸ್ಐ ರೆಡ್ಡಿ ವಿಚಾರಣೆ ಮಾಡಿದ್ದಾರೆ. ಅಕ್ಟೋಬರ್ 13ರಂದು ಪಿಎಸ್ಐಗೆ ಕರೆ ಮಾಡಿರುವ ಸಚಿವ ಜಮೀರ್, ಆರೋಪಿಗೆ ಸಹಾಯ ಮಾಡುವಂತೆ ಹಾಗೂ ಹಣ ನೀಡಲು ಸಮಯಾವಕಾಶ ಕೊಡುವಂತೆ ಪ್ರಭಾವ ಬೀರಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
