ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರ ಪತ್ತೆ – ಭೂ ವಿಜ್ಞಾನಿಗಳ ತಂಡ ಸ್ಪಷ್ಟನೆ

Public TV
1 Min Read

ಕೋಲಾರ: ನಗರದ ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರವೂ ಇದೆ ಎಂಬ ವಂದತಿಗಳಿಗೆ ಶುಕ್ರವಾರ ಹಿರಿಯ ಭೂ ವಿಜ್ಞಾನಿಗಳ ತಂಡ ಹಾಗೂ ಅಧಿಕಾರಿಗಳ ತಂಡ ತೆರೆ ಎಳೆದಿದ್ದಾರೆ.

ಇತ್ತೀಚೆಗೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪೆದ್ದಪಲ್ಲಿ ಗ್ರಾಮದ ಬಳಿಯ ಸರ್ವೆ ನಂ. 15 ಹಾಗೂ 17 ರಲ್ಲಿ, ಸುಮಾರು ಎರಡೂವರೆ ಎಕರೆಯಲ್ಲಿ ಬೆಲೆ ಬಾಳುವ ಖನಿಜ ಸಂಪತ್ತಿನೊಂದಿಗೆ ವಜ್ರ ಇದೆ ಎಂಬ ವದಂತಿಗಳು ಎಲ್ಲಡೆ ಹಬ್ಬಿತ್ತು. ಅದರಂತೆ ಕಳೆದ ದಿನ ಸ್ಥಳಕ್ಕೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ ನೀಡಿದ್ದರು. ಗ್ರಾಮದಲ್ಲಿರುವ ಬಂಡೆಯನ್ನ ಪರಿಶೀನೆಯನ್ನ ನಡೆಸಿ, ಇಲ್ಲಿ ಯಾವುದೇ ಖನಿಜ ಸಂಪತ್ತು ಇಲ್ಲವೆಂದು ಸ್ಪಷ್ಟ ಪಡಿಸಿದರು.

ಹೀಗಾಗಿ ಈ ಬಂಡೆಯನ್ನ ಪೈರೋಕ್ಲಾಸಿಕ್ ರಾಕ್ ಎಂದು ಗುರುತಿಸಿ ಪ್ರವಾಸಿ ತಾಣ ಮಾಡಲು ಕೋಲಾರ ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ ಇದೇ ವೇಳೆ ಪೆದ್ದಪಲ್ಲಿ ಗ್ರಾಮದ ಗಂಗಮ್ಮ ದೇವಾಲಯದ ಹಿಂಭಾಗದಲ್ಲಿ ವಿಶೇಷವಾದ ಹಾಗೂ ಅಪರೂಪವಾದ ಶಿಲಾನ್ಯಾಸಗಳ ಜೊತೆಗೆ ಭೂಸ್ಮಾರಕಗಳು ಪತ್ತೆಯಾಗಿವೆ.

ಈ ಸ್ಮಾರಕಗಳನ್ನ ರಕ್ಷಣೆ ಮಾಡಿ ಪ್ರವಾಸೋದ್ಯಮ ಸ್ಥಳವನ್ನಾಗಿ ಮಾರ್ಪಡಿಸಿ, ಭೂಗೋಳ ಶಾಸ್ತ್ರ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನಿಗಳಿಗೆ ತರಬೇತಿ ನೀಡಲು ಈ ಸ್ಥಳ ಪ್ರಸಿದ್ಧಿ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಭೂವೈಜ್ಞಾನಿಕ ಸರ್ವೇಕ್ಷಣೆ ಅಧಿಕಾರಿಗಳು, ಕರ್ನಾಟಕ ಗಣಿ ವೈಜ್ಞಾನಿಕ ಇಲಾಖೆ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *