ಧರ್ಮ ಶ್ರೇಷ್ಠದಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ: ಮೈಲಾರಲಿಂಗ ಸ್ವಾಮೀಜಿ ಭವಿಷ್ಯ

Public TV
1 Min Read

ಧಾರವಾಡ: ಧರ್ಮ ಶ್ರೇಷ್ಠದಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ ಆಗುತ್ತಾರೆ. ಯಾರು ಮುಂದಿನ ಸಿಎಂ ಅನ್ನೋದು ಇಂದು ಮಧ್ಯಾಹ್ನ 2.45ರೊಳಗೆ ಗೊತ್ತಾಗುತ್ತದೆ ಎಂದು ರಾಜ್ಯ ರಾಜಕಾರಣದ ಕುರಿತು ಮೈಲಾರಲಿಂಗ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಆದಿಶಕ್ತಿ ಹೊಳೆಮ್ಮದೇವಿ ಆರಾಧಕರಾಗಿರುವ ಮೈಲಾರಲಿಂಗ ಸ್ವಾಮೀಜಿ ಅವರು ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹೈಡ್ರಾಮಾವನ್ನು ನೋಡಿ ಭವಿಷ್ಯ ಹೇಳಿದ್ದಾರೆ. ಧರ್ಮ ಶ್ರೇಷ್ಠತೆಯಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ ಆಗುತ್ತಾರೆ. ಜನ ಯಾವುದು ಹೌದು, ಹೌದು ಎನ್ನುತ್ತಿದ್ದಾರೋ ಅದು ಅಲ್ಲವಾಗುತ್ತೆ. ಯಾವುದು ಆಗುವುದಿಲ್ಲ ಎಂದು ಜನ ತಿಳಿದಿದ್ದಾರೆಯೋ ಅದು ನಿಜವಾಗಲಿದೆ ಅಂತ ದೇವಿ ವಾಣಿಯಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಧರ್ಮ ಶ್ರೇಷ್ಠತೆಯ ವ್ಯಕ್ತಿ ರಾಜ್ಯದ ಆಡಳಿತ ನಡೆಸುತ್ತಾನೆ. ಇಂದು ಮಧ್ಯಾಹ್ನ 2.45ರೊಳಗೆ ಎಲ್ಲಾ ತಿಳಿಯಲಿದೆ. ಧರ್ಮದ ಸೇವೆ ಮಾಡುವ ವ್ಯಕ್ತಿ ಸಿಎಂ ಸ್ಥಾನವನ್ನು ಏರುತ್ತಾನೆ ಎಂದು ದೇವಿ ನನ್ನ ಮೂಲಕ ಹೇಳಿಸುತ್ತಿದ್ದಾಳೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *