ಮಕರ ರಾಶಿಗೆ ಶನಿ ಪ್ರವೇಶ – ಜನರಲ್ಲಿ ಆತಂಕ

Public TV
1 Min Read

ಬೆಂಗಳೂರು: ಇಂದಿನಿಂದ ಶನಿ ತನ್ನ ಸ್ಥಾನವನ್ನು ಬದಲಾಯಿಸಿದ್ದಾನೆ. ಸರಿಯಾಗಿ ಇಂದು 12.05ಕ್ಕೆ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಶನಿಯ ಆಗಮನ ಕೆಲ ರಾಶಿಯ ಮೇಲೆ ಗಾಢ ಪರಿಣಾಮ ಬೀರಲಿದೆ. ಮುಖ್ಯವಾಗಿ ಧನಸ್ಸು, ಕುಂಬ, ಮಕರ ರಾಶಿಗಳಿಗೆ ಸಂಕಟ ಎದುರಾಗಲಿದೆ ಎಂದು ಜ್ಯೋತಿಷ್ಯಗಳು ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಹುತೇಕ ಶನೈಶ್ವರ ದೇಗುಲಗಳಲ್ಲಿ ಸಂಜೆವರೆಗೂ ವಿಶೇಷ ಪೂಜೆ, ಹೋಮ, ಕುಂಬಾಭಿಷೇಕ ನಡೆಯಿತು. ಇನ್ನೂ ಮೈಸೂರು ರಸ್ತೆಯಲ್ಲಿರುವ ದೀಪಾಂಜಲಿ ನಗರದ ಶನೈಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ದ್ವಾದಶ ರಾಶಿಗಳ ಬದಲಾವಣೆ ಮೇಲೆ ಹೋಮ, ಕುಂಬಾಭಿಷೇಕ, ಪೂಜೆ ನಡೆಸಲಾಯಿತು.

ದೋಷ ಪರಿಹಾರಕ್ಕಾಗಿ 108 ಮಹಿಳೆಯರು ಕಳಸ ಹೊತ್ತುಕೊಂಡು ಶನೈಶ್ವರನ ದರ್ಶನ ಪಡೆದು, ಪೂಜೆ ಮಾಡಿಸಿದರು. ಸಹಜವಾಗಿ ಪ್ರತಿನಿತ್ಯ ಎರಡು ಗಂಟೆಗೆ ಈ ದೇವಸ್ಥಾನವನ್ನು ಬಂದ್ ಮಾಡಲಾಗುತ್ತಿತ್ತು. ಆದರೆ ಇಂದು ಶನಿಮೌನಿ ಅಮವಾಸ್ಯೆ ಹಾಗೂ ಶನಿ ಪ್ರವೇಶ ಹಿನ್ನೆಲೆ ರಾತ್ರಿ 11 ಗಂಟೆವರೆಗೂ ದೇವಸ್ಥಾನದ ಬಾಗಿಲು ಓಪನ್ ಇರಲಿದೆ.

ಸಂಜೆಯ ನಂತರ ದೇಗುಲಕ್ಕೆ ಅಲಂಕಾರ ಮಾಡಿ, ಮತ್ತೆ ಪೂಜೆ, ಹೋಮ ಕಾರ್ಯಕ್ರಮಗಳು ನಡೆಯಲಿವೆ. ನಾಳೆಯೂ ಮತ್ತೆ ಶನಿದೋಷ ಪರಿಹಾರಕ್ಕಾಗಿ ಬೆಳಗ್ಗೆಯಿಂದ ವಿಶೇಷ ಪೂಜೆಗಳು ನಡೆಯಲಿವೆ.

Share This Article
Leave a Comment

Leave a Reply

Your email address will not be published. Required fields are marked *