ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್

Public TV
1 Min Read

ಬೆಂಗಳೂರು: ದುಬೈನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್ ಬಳಿಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಇದೀಗ ವಿರಾಟ್ ಬಳಿಕ ತಂಡದಲ್ಲಿರುವ ಯುವ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್‍ಗೆ ನಾಯಕತ್ವ ಪಟ್ಟ ಕಟ್ಟಲು ಆರ್​ಸಿಬಿ ತಂಡ ಚಿಂತಿಸಿದೆ.

ಆರ್​ಸಿಬಿ ತಂಡವನ್ನು 2021ರ ಐಪಿಎಲ್ ಬಳಿಕ ಮುನ್ನಡೆಸಿದ ಕೊಹ್ಲಿ ಇದೀಗ ನಾಯಕತ್ವ ತ್ಯಜಿಸಿ ಕೇವಲ ಆಟಗಾರನಾಗಿ ಆಡುವುದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಮುಂದಿನ ನಾಯಕ ಆಯ್ಕೆಗಾಗಿ ತಂಡ ಈಗಿನಿಂದಲೇ ಪ್ರಯತ್ನ ಮುಂದುವರೆಸಿದೆ. ನಾಯಕತ್ವ ರೇಸ್ ನಲ್ಲಿ ಕೆಲ ಆಟಗಾರರ ಹೆಸರು ಕೇಳಿಬರುತ್ತಿದೆ. ಪ್ರಮುಖವಾಗಿ ತಂಡದಲ್ಲಿರುವ ಅನುಭವಿ ಆಟಗಾರ ಮಿಸ್ಟರ್ 360 ಬ್ಯಾಟ್ಸ್‌ಮ್ಯಾನ್‌ ಖ್ಯಾತಿಯ ಎಬಿಡಿ ವಿಲಿಯರ್ಸ್‍ಗೆನಾಯಕತ್ವ ನೀಡಬಹುದೆಂಬ ನಿರೀಕ್ಷೆ ಇದೆ. ಇದನ್ನೂ ಓದಿ: ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

ಎಬಿಡಿಗೆ ಈಗಾಗಲೇ 37 ವರ್ಷ, ವಯಸ್ಸಿನ ಪರಿಮಿತಿಯಲ್ಲಿ ನಾಯಕತ್ವ ನೇಮಿಸಲು ಹೊರಟರೆ ಯುವ ಆಟಗಾರರ ಸಾಲಲ್ಲಿ ಮೊದಲಿಗರಾಗಿ ಕಾಣಸಿಗುವುದು ಆರ್​ಸಿಬಿಯ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್. ಹಾಗಾಗಿ ಆರ್​ಸಿಬಿಯ ಭವಿಷ್ಯದ ಬಗ್ಗೆ ಗಮನಿಸಿದರೆ ಪಡಿಕ್ಕಲ್ ಉತ್ತಮ ಆಯ್ಕೆ ಆದರೆ ಅನುಭವವನ್ನು ಗಮನಿಸಿದರೆ ಎಬಿಡಿ ಉತ್ತಮವಾಗಿ ಗೋಚರಿಸುತ್ತಾರೆ. ಇವರೊಂದಿಗೆ ಯಜುವೇಂದ್ರ ಚಹಲ್, ಗ್ಲೇನ್ ಮ್ಯಾಕ್ಸ್​ವೆಲ್ ಹೆಸರು ಕೂಡ ಕೇಳಿಬರುತ್ತಿದ್ದು, ಆರ್​ಸಿಬಿ ಫ್ರಾಂಚೈಸ್ ಯಾರಿಗೆ ಮಣೆಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಎಬಿಡಿ, ಪಡಿಕ್ಕಲ್ ಜೊತೆಗೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್

Share This Article
Leave a Comment

Leave a Reply

Your email address will not be published. Required fields are marked *