ಪುನೀತ್ ಸಮಾಧಿ ಬಳಿ 3 ಅಡಿ ಪುತ್ಥಳಿ ನಿರ್ಮಾಣ – ಪಾರಿವಾಳ ಸಮೇತ ಅಂತಿಮ ಸ್ಪರ್ಶ

Public TV
1 Min Read

– ರಾಜಕುಮಾರನ ಸ್ಮರಣಿಕೆಗಳಿಗೆ ಸಿಕ್ಕಾಪಟ್ಟೆ ಬೇಡಿಕೆ

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದ ನೋವು ಇನ್ನೂ ಮಾಸಿಲ್ಲ. ಇದೀಗ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿ ಬಳಿ ಇಡಲು ಅಪ್ಪು 3 ಅಡಿ ಎತ್ತರದ ಪುತ್ಥಳಿ ನಿರ್ಮಾಣವಾಗ್ತಿದೆ.

ಡಾ.ರಾಜ್ ಪುತ್ಥಳ ತಯಾರಿಸಿದ್ದ ಶಿಲ್ಪಿ ಶಿವದತ್ತ ಅವರೇ ಪುನೀತ್ ಪುತ್ಥಳಿ ತಯಾರು ಮಾಡ್ತಿದ್ದಾರೆ. ‘ನಾನೇ ರಾಜಕುಮಾರ’ ಹಾಡಿನಲ್ಲಿ ಬಂದು ಕೂರುವ ಪಾರಿವಾಳ ಸಮೇತ ಈ ಪುತ್ಥಳಿ ತಯಾರಾಗ್ತಿರೋದು ವಿಶೇಷವಾಗಿದೆ. ಮನೆಯಲ್ಲಿಡಲು ಅಭಿಮಾನಿಗಳಿಂದ ಅಪ್ಪು ಪುಟ್ಟ ಶಿಲ್ಪ ಸ್ಮರಣಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 400 ಶಿಲ್ಪ ಸ್ಮರಣಿಕೆಗೆ ಬೇಡಿಕೆ ಬಂದಿದ್ದು, ಅದರ ತಯಾರಿಕಾ ಕೆಲಸವೂ ನಡೆಯುತ್ತಿದೆ ಅಂತ ಶಿವದತ್ತ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಅತ್ತೆ ನಾಗಮ್ಮಗೆ ಸುದ್ದಿ ಇನ್ನೂ ಗೊತ್ತೇ ಇಲ್ಲ- ಗಾಜನೂರಿನ ಪ್ರತಿ ಮನೆಯಲ್ಲೂ ನೀರವ ಮೌನ!

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಅನೇಕ ಮಾನವೀಯ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ಹಲವರು ನೇತ್ರದಾನ, ದೇಹದಾನಕ್ಕೆ ಸಹಿ ಮಾಡಿದ್ದರೆ, ಇನ್ನೂ ಕೆಲವರು ಅವರ ಫೋಟೋಗಳನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ಅಪ್ಪು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರ ಕುಟುಂಬಸ್ಥರಿಗೂ ತಿಳಿದಿರಲಿಲ್ಲ. ಇದೀಗ ಅವರ ಈ ಕೆಲಸಗಳನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಮುಂದುವರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *