ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ

Public TV
2 Min Read

ನವದೆಹಲಿ: ಪತಿಯೋರ್ವ ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಲೆ ಮಾಡಿ ಶವವನ್ನು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಕಪಿಲ್ ವಿಹಾರ್ ನಿವಾಸಿ ವಿಜಯ್(38) ಜೂನ್ 18 ರಂದು ಭಾಲ್ಸ್ವಾ ಡೈರಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ಕುರಿತು ತನಿಖೆ ಮಾಡಿದ್ದಾರೆ.

ಪರಿಶೀಲನೆ ವೇಳೆ ಬಾತ್‍ರೂಮ್ ಒಳಗೆ ಬಟ್ಟೆಯಲ್ಲಿ ಸುತ್ತಿದ್ದ ಮೃತ ಸಂತೋಷಿದೇವಿ ದೇಹ ಪತ್ತೆಯಾಗಿದೆ. ಈ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ್‍ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್

ತನಿಖೆಯಲ್ಲಿ ತಿಳಿದಿದ್ದೇನು?
ವಿಜಯ್‍ಗೆ ಈ ಹಿಂದೆ ಬೇರೊಂದು ಮಹಿಳೆ ಜೊತೆ ವಿವಾಹವಾಗಿದ್ದು, ಆತನಿಗೆ 4 ಮಕ್ಕಳಿದ್ದರು. ಆದರೆ ಮೊದಲ ಹೆಂಡತಿ ಅವನಿಂದ ಬೇರೆಯಾಗಿದ್ದಳು. ಈ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷಿದೇವಿಯನ್ನು ವಿಜಯ್ ಭೇಟಿಯಾಗಿದ್ದು, ನಂತರ ಅದು ಪ್ರೇಮಕ್ಕೆ ತಿರುಗಿಕೊಂಡಿದೆ.

ಸಂತೋಷಿಗೂ 4 ಮಕ್ಕಳಿದ್ದು 14, 13 ಮತ್ತು 12 ವರ್ಷದ ಮೂವರು ಹುಡುಗಿಯರು ಮತ್ತು 8 ವರ್ಷದ ಒಬ್ಬ ಗಂಡು ಮಗುವಿದೆ. ಆಕೆಯೂ ಪತಿಯಿಂದ ಬೇರ್ಪಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದಳು.

CNG CRIME

ಈ ಮಧ್ಯೆ ವಿಜಯ್ ಮತ್ತು ಸಂತೋಷಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇವರಿಬ್ಬರು ಒಂದು ಮಗುವನ್ನು ಸಹ ಹೊಂದಿದ್ದರು. ನಂತರ ಎಲ್ಲ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ವಿಜಯ್ ಮತ್ತು ಸಂತೋಷಿ ನಡುವೆ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು. ಇದನ್ನೂ ಓದಿ: ಪತ್ನಿ, ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ- ನಾಲ್ವರು ಸಾವು, ಇಬ್ಬರು ಗಂಭೀರ

CRIME 2

ಜೂನ್ 17ರ ಸಂಜೆ ಸಂತೋಷಿ ಕೆಲಸ ಮುಗಿಸಿ ವಾಪಸ್ಸಾಗಿದ್ದು, ಎಲ್ಲಾ ಮಕ್ಕಳು ಕೆಳಗೆ ಮಲಗಿಕೊಂಡಿದ್ದರು. ರಾತ್ರಿ 11:30ರ ಸುಮಾರಿಗೆ ಇವರಿಬ್ಬರ ನಡುವೆ ಜಗಳ ನಡೆದಿದೆ. ಇದು ಅತಿರೇಕಕ್ಕೆ ಹೋಗಿ ವಿಜಯ್, ಸಂತೋಷಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬೇರೆಕಡೆ ಸಾಗಿಸಲು ಬಟ್ಟೆಯಲ್ಲಿ ಸುತ್ತಿದ್ದಾನೆ. ಆದರೆ ಇದನ್ನು ನಿಭಾಯಿಸಲು ಸಾಧ್ಯವಾಗದೆ ಜೂನ್ 18ರಂದು ರಾತ್ರಿ 8.45ರ ಸುಮಾರಿಗೆ ಪೊಲೀಸರ ಮೊರೆ ಹೋಗಿದ್ದು, ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

Live Tv

Share This Article
Leave a Comment

Leave a Reply

Your email address will not be published. Required fields are marked *