ಅವಾಚ್ಯ ಪದ ಬಳಸಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಎಚ್.ವಿಶ್ವನಾಥ್

Public TV
2 Min Read

– ಮಹಿಳಾ ಕಾಂಗ್ರೆಸ್‍ನ ಕಾರ್ಯಕರ್ತೆಯರ ಎದುರೇ ಕೀಳು ಭಾಷೆ ಬಳಕೆ

ನವದೆಹಲಿ: ಮಹಿಳಾ ಕಾಂಗ್ರೆಸ್‍  ಕಾರ್ಯಕರ್ತೆಯರ ಎದುರೇ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ನಾಯಕ ವಿರುದ್ಧ ಅವಾಚ್ಯ ಪದ ಬಳಸಿ ಗುಡುಗಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಹಿಳಾ ಕಾಂಗ್ರೆಸ್‍ ಕಾರ್ಯಕರ್ತೆಯರು ಎಚ್.ವಿಶ್ವನಾಥ್ ಅವರ ಯೋಗಕ್ಷೇಮ ವಿಚಾರಿಸಿದರು. ಬಳಿಕ ಕಾಂಗ್ರೆಸ್ ತಾಯಿ ಎಂದು ಹೇಳುತ್ತಿದ್ದ ನೀವು ಯಾಕೆ ಪಕ್ಷವನ್ನು ಬಿಟ್ಟು ಹೋದ್ರಿ ಅಂತ ಕೇಳಿದರು. ಇದಕ್ಕೆ ಉತ್ತರ ನೀಡಿದ ಎಚ್.ವಿಶ್ವನಾಥ್ ಅವರು, ಕಾಂಗ್ರೆಸ್ ಉತ್ತಮ ಪಕ್ಷ. ಆದರೆ ಅಲ್ಲಿನ ನಾಯಕರು ಅಯೋಗ್ಯರು (ಕಾಂಗ್ರೆಸ್ ಇಸ್ ಗುಡ್. ಬಟ್ ಕಾಂಗ್ರೆಸ್ ಲೀಡರ್ಸ್ ಆರ್ ನಾಟ್ ಗುಡ್). ಕಾಂಗ್ರೆಸ್ ನಾಯರು ಅಯೋಗ್ಯ ಸು…. ಎಂದು ಅವಾಚ್ಯ ಪದ ಬಳಸಿ ಕಿಡಿಕಾರಿದರು.

ಎಚ್.ವಿಶ್ವನಾಥ್ ಅವರ ಪದ ಬಳಕೆಯನ್ನು ಕೇಳಿಸಿಕೊಂಡ ಮಹಿಳಾ ಕಾಂಗ್ರೆಸ್‍ ಕಾರ್ಯಕರ್ತೆಯರು ಕಂಗಾಲಾದರು. ಎಚ್.ವಿಶ್ವನಾಥ್‍ ಅವರಿಗೆ ಪ್ರಶ್ನೆ ಕೇಳಿದ್ದ ಕಾರ್ಯಕರ್ತೆ ಕಣ್ಣರಳಿಸಿ, ಯಾಕಪ್ಪಾ ಪ್ರಶ್ನೆ ಕೇಳಿದೆ ಎಂಬಂತೆ ಪ್ರತಿಕ್ರಿಯೆ ನೀಡಿದರು. ಅಲ್ಲಿಂದ ಸ್ವಲ್ಪ ಮುಂದೆ ಹೋಗಿದ ಎಚ್.ವಿಶ್ವನಾಥ್ ಅವರು ಹಿಂದಕ್ಕೆ ಹೆಜ್ಜೆ ಹಾಕಿ ಮಾತನಾಡುತ್ತಿದ್ದಂತೆ ಕಾರ್ಯಕರ್ತೆಯೊಬ್ಬರು ತಲೆ ತಗ್ಗಿಸಿ, ಅನರ್ಹ ಶಾಸಕರ ಮುಖ ನೋಡಲು ಹಿಂದೇಟು ಹಾಕುವಂತೆ ತೋರಿದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಪ್ರಕರಣವು ಕೋರ್ಟ್ ನಲ್ಲಿದೆ. ಹೀಗಾಗಿ ದೆಹಲಿಗೆ ಆಗಮಿಸಿದ್ದು, ಇಂದು ಸಂಜೆ ವಕೀಲರನ್ನು ಭೇಟಿಯಾಗಿ ಪ್ರಕರಣದ ಕುರಿತು ಚರ್ಚೆ ಮಾಡಲಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯ ಕೇಳುತ್ತೇವೆ. ಈ ಮೂಲಕ ರಾಜ್ಯದಲ್ಲಿ ಎದುರಾದ ಪ್ರವಾಹಕ್ಕೆ ಸೂಕ್ತ ಪರಿಹಾರ ಧನ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದೇವೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಆದರೆ ಕ್ಷೇತ್ರದ ಹಾಗೂ ರಾಜ್ಯದ ಜನರಿಗಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಅನರ್ಹ ಶಾಸಕರು ಬ್ಲೂ ಬಾಯ್ಸ್ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಹಾಗಾದರೆ ಅವರು ರೆಡ್ ಬಾಯ್ ನಾ? ತಮಾಷೆಗೆ ಬಾಂಬೆ ಬ್ಲೂ ಬಾಯ್ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರು ನಮ್ಮ ಸ್ನೇಹಿತರು ಎಂದರು.

Share This Article
Leave a Comment

Leave a Reply

Your email address will not be published. Required fields are marked *