ಶೋಯೆಬ್‍ಗೆ ಶಾಕ್ ಕೊಟ್ಟ ಪಿಸಿಬಿ- 10 ಕೋಟಿ ರೂ. ಮಾನನಷ್ಟ ಕೇಸ್

Public TV
2 Min Read

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಹೆಬ್ ಅಖ್ತರ್‍ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಾಕ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿವಾದತ್ಮಾಕ ಹೇಳಿಕೆ ನೀಡುತ್ತಿರೋ ಅಖ್ತರ್ ವಿರುದ್ಧ ಪಿಸಿಬಿ ಸಲಹೆಗಾರ ತಫಝುಲ್ ರಿಝ್ವಿ ಮಾನನಷ್ಟ ಹಾಗೂ ಕ್ರಿಮಿನಲ್ ವಿಚಾರಣೆಗೆ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಪಿಸಿಬಿ ಅಧಿಕೃತವಾಗಿ ಮಾಹಿತಿ ನೀಡಿದ್ದು, ಪಿಸಿಬಿ ಕಾನೂನು ಸಲಹೆಗಾರ ರಿಝ್ವಿ ತಮ್ಮ ನಿರ್ದೇಶನದಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದೆ.

ಪಾಕಿಸ್ತಾನ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್ ವಿರುದ್ಧ 3 ವರ್ಷ ನಿಷೇಧ ವಿಧಿಸಿದ್ದ ವಿಚಾರದ ಕುರಿತು ಅಖ್ತರ್ ಮಾತನಾಡಿದ್ದು, ಈ ವೇಳೆ ತಮ್ಮ ವಿಡಿಯೋದಲ್ಲಿ ಕೆಟ್ಟ ವ್ಯಾಖ್ಯಾಗಳನ್ನು ಬಳಿಸಿ ಪಿಸಿಬಿ ಕಾನೂನು ಸಲಹೆಗಾರರ ವಿರುದ್ಧ ಮಾತನಾಡಿದ್ದರು. ಪರಿಣಾಮ ಅಸಮಾಧಾನ ವ್ಯಕ್ತಪಡಿಸಿರುವ ಪಿಸಿಬಿ 10 ಕೋಟಿ ರೂ. ಮಾನನಷ್ಟ ಪ್ರಕರಣ ದಾಖಲಿಸಿದೆ.

ಅಖ್ತರ್ ಬಳಕೆ ಮಾಡಿರುವ ಪದಗಳಿಂದ ಪಿಸಿಬಿಗೆ ಬೇಸರವಾಗಿದೆ. ಸಂಸ್ಥೆಯ ಸಲಹೆಗಾರರ ಕುರಿತಾಗಿ ಮಾತನಾಡುವ ವೇಳೆ ಎಚ್ಚರಿಕೆ ವಹಿಸಿಬೇಕಾಗಿತ್ತು. ಅಖ್ತರ್ ಬಳಿಸಿದ ಭಾಷೆ ನಿಜಕ್ಕೂ ಅಸಹನೀಯವಾಗಿದೆ. ಆದ್ದರಿಂದ ರಿಝ್ವಿ ಅವರು ತಮ್ಮದೇ ನಿರ್ದೇಶನದಲ್ಲಿ ಪ್ರಕರಣ ದಾಖಲಿಸಿದ್ದು, ಪಿಸಿಬಿ ಕೂಡ ತನ್ನ ಹಕ್ಕನ್ನು ಕಾಯ್ದುಕೊಳ್ಳಲಿದೆ ಎಂದು ಬೋರ್ಡ್ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಅಖ್ತರ್ ಸಾಕಷ್ಟು ಸಕ್ರಿಯರಾಗಿದ್ದು, ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಈ ವಿಡಿಯೋಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಮಾತ್ರವಲ್ಲದೇ ವಿವಿಧ ದೇಶದ ಆಟಗಾರು ಹಾಗೂ ಭಾರತ-ಪಾಕಿಸ್ತಾನ ಕುರಿತು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಕಳೆದ ಕೆಲ ದಿನಗಳ ಹಿಂದೆಯೂ ಭಾರತ-ಪಾಕಿಸ್ತಾನ ಕ್ರಿಕೆಟ್ ಟೂರ್ನಿ ಆಯೋಜಿಸುವ ಕುರಿತು ಅಖ್ತರ್ ಮಾತನಾಡಿದ್ದರು.

ಅಕ್ಮಲ್ ನಿಷೇಧ ವಿಚಾರವಾಗಿ ರಿಝ್ವಿ ವಿರುದ್ಧ ಟೀಕೆ ಮಾಡಿದ್ದ ಅಖ್ತರ್, ಆತನಿಗೆ ತಲೆ ಇಲ್ಲ. ಇಂತಹ ಪ್ರಕರಣದಲ್ಲಿ 3 ವರ್ಷ ನಿಷೇಧ ವಿಧಿಸುವ ಅಗತ್ಯವಿರಲಿಲ್ಲ ಎಂದಿದ್ದರು. ಅಲ್ಲದೇ ನಜೀರ್ ವಿರುದ್ಧವೂ ಟೀಕೆ ಮಾಡಿ, ಸೆಹ್ವಾಗ್ ಇರೋ ತಲೆ ಇಮ್ರಾನ್ ನಜೀರ್ ಗೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಆತನಿಗೆ ನಾನು ತಾಳ್ಮೆಯಿಂದ ಆಡುವಂತೆ ಹೇಳಿದ್ದೆ. ಭಾರತದ ವಿರುದ್ಧ ಶತಕ ಸಿಡಿಸಿದ ಬಳಿಕ ನಾನು ಈ ಮಾತನ್ನು ಹೇಳಿದ್ದೆ. ಆದರೆ ನನ್ನ ಮಾತನ್ನು ಕೇಳದ ಕಾರಣ ಆತ ತಂಡದಿಂದ ದೂರ ಉಳಿದ ಎಂದು ಅಖ್ತರ್ ಕಿಡಿಕಾಡಿದ್ದರು. ಅಲ್ಲದೇ ವಾಸೀಂ ಅಕ್ರಂ ನನ್ನನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ಕೇಳಿದ್ದರೆ ನಾನು ಆತನನ್ನು ಕೊಲೆ ಮಾಡುತ್ತಿದ್ದೆ. ಆದರೆ ವಾಸೀಂ ಅಕ್ರಂ ನನ್ನ ಬಳಿ ಎಂದು ಮ್ಯಾಚ್ ಫ್ರಿಕ್ಸಿಂಗ್ ಕುರಿತು ಮಾತನಾಡಿಲ್ಲ ಎಂದು ಅಖ್ತರ್ ಕಾಮೆಂಟ್ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *