ತವರು ಮನೆಯಿಂದ ಹಣ ತರದ ಪತ್ನಿಯನ್ನ ಬರ್ಬರವಾಗಿ ಕೊಂದ ಪತಿಗೆ ಮರಣದಂಡನೆ

Public TV
1 Min Read

ಮೈಸೂರು: ತವರು ಮನೆಯಿಂದ ಹಣ ತರದ ಹೆಂಡತಿಯನ್ನು ರಸ್ತೆಯಲ್ಲೇ ಬರ್ಬರವಾಗಿ ಕೊಂದಿದ್ದ ಪತಿಗೆ ಮೈಸೂರು ಜಿಲ್ಲಾ ನ್ಯಾಯಾಲಯ (Mysuru District Court) ಮರಣದಂಡನೆ ವಿಧಿಸಿದೆ.

ಮೈಸೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. 2024ರ ಜನವರಿಯಲ್ಲಿ ಮೈಸೂರಿನ ಹೊರ ವಲಯದ ಆಲನಹಳ್ಳಿಯ (Alanahalli) ಮುಖ್ಯ ರಸ್ತೆಯಲ್ಲಿ ಕೊಲೆ ನಡೆದಿತ್ತು. ಇದನ್ನೂ ಓದಿ: ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯ ಹತ್ಯೆ – 18 ದಿನಗಳ ಬಳಿಕ ಶವ ಹೊರತೆಗೆದು ಪೋಸ್ಟ್ ಮಾರ್ಟಂ

ಆಲನಹಳ್ಳಿಯ ನಿವಾಸಿ ಮಹೇಶ್ ಇಸ್ಪೀಟ್ ಚಟಕ್ಕೆ ಬಿದ್ದು ಬಹಳಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಪತ್ನಿ ಶಿಲ್ಪಾಗೆ ತವರು ಮನೆಯಿಂದ ಹಣ ತರಲು ಪೀಡಿಸುತ್ತಿದ್ದ. ಹಣ ತರಲು ಶಿಲ್ಪಾ ನಿರಾಕರಿಸಿದ ಕಾರಣ ಆಲನಹಳ್ಳಿ – ಟಿ. ನರಸೀಪುರ ರಸ್ತೆಯಲ್ಲೇ ಪತ್ನಿ ಶಿಲ್ಪಾಳನ್ನ ಕೊಲೆ ಮಾಡಿದ್ದ. ಇದನ್ನೂ ಓದಿ: ಬಾನು ಮುಷ್ತಾಕ್‍ಗೆ ಚಾಮುಂಡಿ ತಾಯಿಯ ಮೇಲೆ ನಂಬಿಕೆ ಇದ್ರೆ ಉದ್ಘಾಟನೆಗೆ ಬರುತ್ತಾರೆ: ಜಿಟಿಡಿ

ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

Share This Article