ಸುಳ್ಯದಲ್ಲಿ ಹೋರಿಗೆ ತಲವಾರಿನಿಂದ ಕಡಿದು ವಿಕೃತಿ ಮೆರೆದ ದುಷ್ಕರ್ಮಿಗಳು!

Public TV
0 Min Read

ಮಂಗಳೂರು: ಮೂಕ ಪ್ರಾಣಿಯೊಂದರ ಕಾಲು ಕಡಿದು ವಿಕೃತಿ ಮೆರೆದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ಸುಳ್ಯ ಪೇಟೆಯಾದ್ಯಂತ ತಿರುಗಾಡುತ್ತಾ ಸಿಕ್ಕಿದ ಆಹಾರವನ್ನು ತಿಂದು ಬದುಕುತ್ತಿದ್ದ ಹೋರಿಯನ್ನು ದುಷ್ಕರ್ಮಿಗಳು ಶನಿವಾರ ತಡ ರಾತ್ರಿ ಹಿಡಿದು ಒಯ್ಯಲು ಯತ್ನಿಸಿದ್ದರು. ಆದರೆ ಬಲಿಷ್ಠ ಹೋರಿ ಹೊರಳಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅದರ ಕಾಲು ಮತ್ತು ಬೆನ್ನಿಗೆ ತಲವಾರಿನಲ್ಲಿ ಕಡಿದಿದ್ದಾರೆ. ಬಳಿಕ ಹೋರಿ ಅವರ ಕೈಯಿಂದ ತಪ್ಪಿಸಿಕೊಂಡು ಬಂದಿದೆ ಎನ್ನಲಾಗುತ್ತಿದೆ.

ಸದ್ಯ ಸುಳ್ಯದ ಹಿಂದು ಸಂಘಟನೆ ಕಾರ್ಯಕರ್ತರು ಹೋರಿಯನ್ನು ರಕ್ಷಿಸಿ, ಆರೈಕೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *