ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಆಹಾರ ತನಿಖೆಗೊಳಪಡಿಸಿ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ- ಡಿಸಿಎಂ

Public TV
1 Min Read

– 3 ಬಾರಿ ಊಟ ಮಾಡಿದಾಗ ನಾನೇ ಎಚ್ಚರಿಕೆ ಕೊಟ್ಟಿದ್ದೆ

ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ಪೌರಕಾರ್ಮಿಕರಿಗೆ ವಿಷಾಹಾರ ನೀಡುತ್ತಿರುವ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.

ಊಟದ ವಿಚಾರವಾಗಿ ಆಕ್ರೋಶ ಹೊರಹಾಕಿದ ಡಿಸಿಎಂ, ನಾನು ಮಾಧ್ಯಮದಲ್ಲಿ ವರದಿ ಬಂದಿದ್ದನ್ನು ನೋಡಿದ್ದೇನೆ. ಈ ಕುರಿತು 3 ಬಾರಿ ನಾನೇ ಊಟ ಮಾಡಿದಾಗ ಎಚ್ಚರಿಕೆ ಕೊಟ್ಟಿದ್ದೇನೆ. ಈ ಸಂಬಂಧ ತನಿಖೆ ಮಾಡಲು ಕಮೀಷನರ್ ಗೆ ಸೂಚನೆ ಕೊಟ್ಟಿದ್ಚದೇನೆ ಅಂದ್ರು.

ಎಲ್ಲ ಕ್ಯಾಂಟೀನ್ ಗಳ ಮೇಲೆ ತನಿಖೆ ಮಾಡಲು ಸೂಚನೆ ನೀಡಲಾಗಿದೆ. ವರದಿ ಬಂದ ಮೇಲೆ ಟೆಂಡರ್‍ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಬಡವರಿಗೆ ಕೊಡುವ ಊಟ ವಿಚಾರದಲ್ಲಿ ಅನ್ಯಾಯ ಆಗೊದು ಬೇಡ. 198 ವಾರ್ಡ್ ಗಳ ಆಹಾರ ಪರೀಕ್ಷೆ ಮಾಡಿಸಲಾಗುತ್ತದೆ. ಈ ವಿಷಾಹಾರದ ವಿಚಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಲಾಗುತ್ತದೆ. ತಪ್ಪು ಕಂಡು ಬಂದ್ರೆ ಕಠಿಣ ಕ್ರಮಕ್ಕೆ ಸೂಚಿಸಲಾಗುತ್ತದೆ ಎಂದು ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *