-ಜ.14ರಿಂದ ಜ.26ರವರೆಗೆ ನಡೆಯಲಿರುವ ಫ್ಲವರ್ ಶೋ
ಬೆಂಗಳೂರು: ಇಂದಿನಿಂದ ಜ.26ರವರೆಗೆ ಲಾಲ್ಬಾಗ್ನಲ್ಲಿ (LaalBagh) ನಡೆಯಲಿರುವ 219ನೇ ಫಲಪುಷ್ಪ ಪ್ರದರ್ಶನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಚಾಲನೆ ನೀಡಿದರು. ಪ್ರದರ್ಶನದಲ್ಲಿ ಹೂವಿನ ಮೂಲಕವೇ ತೇಜಸ್ವಿ ವಿಸ್ಮಯ ಲೋಕವನ್ನು ಸೃಷ್ಟಿಸಿದ್ದಾರೆ.
ಇದೇ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆ ತುಂಬೆಲ್ಲಾ ತೇಜಸ್ವಿ ಬದುಕಿನ ಕುರಿತ ಪರಿಕಲ್ಪನೆ ಮೂಡಿಸಿದ್ದಾರೆ. ಹಾರುವ ಓತಿ ಹಾಗೂ ಆನೆಯ ಮುಖದ ಪ್ರವೇಶದ್ವಾರ, ಪೂರ್ಣಚಂದ್ರ ತೇಜಸ್ವಿ ಅವರ ನಾನಾ ಪ್ರತಿಮೆ ಹೂವಿನಿಂದಲೇ ನಿರ್ಮಿಸಿದ್ದಾರೆ. ಇನ್ನೂ ಐದು ಕಡೆ ತುರ್ತುಘಟಕ ವ್ಯವಸ್ಥೆ, ಜೇನುಹುಳು, ನಾಯಿಯಿಂದ ತೊಂದರೆಯಾದ್ರೆ ಚಿಕಿತ್ಸೆ ನೀಡಲು ವ್ಯವಸ್ಥೆ, 15 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಜುಬೀನ್ ಗರ್ಗ್ ಕೊಲೆಯಾಗಿಲ್ಲ, ಲೈಫ್ ಜಾಕೆಟ್ ನಿರಾಕರಿಸಿದ್ದಕ್ಕೆ ಸಾವು: ಸಿಂಗಾಪುರ ಪೊಲೀಸರು
ಪ್ರದರ್ಶನಕ್ಕೆ ಬರಲು ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಎಂಟ್ರಿ ಪಡೆಯಲು ಅವಕಾಶವಿದೆ. ಈ ಬಾರಿ ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ. ಹಾಗೂ ರಜೆ ದಿನಗಳಲ್ಲಿ 100 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಜೊತೆಗೆ ಮಕ್ಕಳಿಗೆ 30 ರೂ. ಹಾಗೂ ಆರು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ ನೀಡಲಾಗಿದೆ.
ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ “ಪ್ರಕೃತಿಯ ವಿಸ್ಮಯ”
ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ಬಾಗ್ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಹಿರಿಯ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರೊಂದಿಗೆ ಚಾಲನೆ ನೀಡಿದೆ. ತೋಟಗಾರಿಕೆ ಇಲಾಖೆಯು ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ… pic.twitter.com/ucxmUMHkod
— DK Shivakumar (@DKShivakumar) January 14, 2026
ಉದ್ಘಾಟನೆ ಬಳಿಕ ಡಿಕೆಶಿ ಶಿಡ್ಲಘಟ್ಟ ಬ್ಯಾನರ್ ವಿಚಾರವಾಗಿ ಮಾತನಾಡಿ, ಇದು ಪವಿತ್ರ ಜಾಗ. ಚಿಲ್ಲರೆ ವಿಚಾರಗಳನ್ನ ಇಲ್ಲಿ ಚರ್ಚೆ ಮಾಡೋದು ಬೇಡ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ಹೆಣ್ಣು ಮಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಡಿಸಿಎಂ ಡಿಕೆಶಿ ಜೊತೆ ಸಚಿವರಾದ ಎಸ್ಎಸ್ ಮಲ್ಲಿಕಾರ್ಜುನ್, ರಾಮಲಿಂಗರೆಡ್ಡಿ, ಶಾಸಕ ಉದಯ ಗರುಡಚಾರ್, ಎಂಎಲ್ಸಿ ಶರವಣ ಸೇರಿದಂತೆ ಹಲವರು ಭಾಗಿಯಾಗಿದ್ದರು.ಇದನ್ನೂ ಓದಿ: ಅಮೂಲ್ಯ ನಟನೆಯ ಪೀಕಬೂ ಚಿತ್ರಕ್ಕೆ ಶ್ರೀರಾಮ್ ಹೀರೋ



