ಬೆಂಗಳೂರು: ಶಾಸಕರನ್ನ ಸರಿಯಾಗಿ ಮಾತನಾಡಿಸಲ್ಲ ಎಂಬ ಶಾಸಕ ರಾಜು ಕಾಗೆ (Raju Kage) ಆರೋಪ ಮಾಡಿದ್ದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ಮುಜುಗರ ತಂದಿತ್ತು. ತಮ್ಮದೇ ಪಕ್ಷದ ಶಾಸಕ ಆರೋಪ ಮಾಡಿದ 24 ಗಂಟೆಯಲ್ಲೇ ಡಿಕೆಶಿ ಮನೆ ಬಾಗಿಲಿಗೆ ಹಲವು ಶಾಸಕರು ದೌಡಾಯಿಸಿದ್ದರು.
ರೋಣಾ ಶಾಸಕ ಜಿ.ಎಸ್.ಪಾಟೀಲ್, ಹೊನ್ನಾಳಿ ಶಾಸಕ ಶಾಂತನಗೌಡ, ಶೃಂಗೇರಿ ಶಾಸಕ ರಾಜೇಗೌಡ, ಮಂಡ್ಯ ಶಾಸಕ ಗಣಿಗ ರವಿ ಸೇರಿ ಹಲವರು ಭೇಟಿ ಮಾಡಿದರು. ಶಾಸಕರ ಜೊತೆ ಮಾತುಕತೆ ನಡೆಸಿದರು. ಶಾಸಕರನ್ನು ಕೂರಿಸಿಕೊಂಡು ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿದರು. ಇದನ್ನೂ ಓದಿ: ದುಡ್ಡು ಕೊಟ್ಟರೆ ಮಾತ್ರ ವರ್ಕ್ ಆರ್ಡರ್: ಬಿಆರ್ ಪಾಟೀಲ್ ಬಳಿಕ ರಾಜು ಕಾಗೆ ದಂಗೆ
ರಾಜು ಕಾಗೆ ಆರೋಪಕ್ಕೆ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನೀವು ದಿನ ಬನ್ನಿ, ಬರ್ತಾ ಇದೀರಿಲ್ವಾ? ನಿಮಗೆ ಮುಖ ತೋರಿಸ್ತಾನೆ ಇದೀನಿ. ಪಾಪ ನಮ್ಮ ಕೆಲ ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ ಎಂದು ನಗೆ ಬೀರಿದರು.
ಅಸಮಾಧಾನ ಹೊರಹಾಕಿದ ಶಾಸಕರ ಜೊತೆ ಮಾತಾಡ್ತೀರಾ ಎಂಬ ಪ್ರಶ್ನೆಗೆ, ಕರೆದು ಮಾತಾಡ್ತೀನಿ ಎಂದಷ್ಟೇ ಹೇಳಿ ಹೊರಟರು. ಇದನ್ನೂ ಓದಿ: ಅನುದಾನ ಕೊರತೆ ಹೇಳಿಕೆ ಕೊಟ್ಟವರಿಗೆ ತಲೆ ಕೆಟ್ಟಿರಬೇಕು: ಬೇಳೂರು ಗೋಪಾಲಕೃಷ್ಣ