ಇದು ರಾಜ್ಯದ ಪ್ರತಿಷ್ಠಿತ ಕುಟುಂಬವೊಂದರ ಬಿಗ್ ಇಂಟ್ರೆಸ್ಟಿಂಗ್ ಕಹಾನಿ

Public TV
1 Min Read

ಬೆಂಗಳೂರು: ಇದು ರಾಜ್ಯದ ಪ್ರತಿಷ್ಠಿತ ಕುಟುಂಬವೊಂದರ ಬಿಗ್ ಇಂಟ್ರೆಸ್ಟಿಂಗ್ ಕಹಾನಿ. ಸಮ್ಮಿಶ್ರ ಸರ್ಕಾರದ ಸಚಿವರಾಗಿರುವ ಪುತ್ರಿ ರಾಜಕಾರಣಕ್ಕೆ ಎಂಟ್ರಿ ಆಗುತ್ತಿದ್ದಾರೆ. ಇಷ್ಟು ದಿನ ರಾಜಕೀಯದಿಂದ ದೂರು ಉಳಿದುಕೊಂಡಿದ್ದ ಸಚಿವರ ಪುತ್ರಿ ರಾಜ್ಯ ರಾಜಕಾರಣದತ್ತ ಮುಖ ಮಾಡುತ್ತಿದ್ದಾರೆ.

ಸಚಿವ ಡಿ.ಸಿ.ತಮ್ಮಣ್ಣ ಅವರ ಪುತ್ರಿ ಸೌಮ್ಯ ರಮೇಶ್ ರಾಜಕೀಯ ರಂಗ ತಾಲೀಮು ನಡೆಸಿದ್ದಾರೆ. ಪತಿ ರಮೇಶ್ ಹೆಸರಲ್ಲಿ ರಾಜಕಾರಣಕ್ಕೆ ಬಂದರೆ ಗೆಲುವು ಸಿಗುವುದು ಕಠಿಣ. ಹೀಗಾಗಿ ತವರು ಮನೆಯ ಆಶ್ರಯದಲ್ಲಿ ರಾಜಕಾರಣಕ್ಕೆ ಬರಲು ನಿರ್ಧರಿಸಿದ್ದಾರಂತೆ. ತವರು ಮನೆಯಲ್ಲಿ ಅಪ್ಪ, ಮಾವ ಎಲ್ಲರು ಸಕ್ರೀಯ ರಾಜಕಾರಣದಲ್ಲಿದ್ದಾರೆ. ಹಾಗಾಗಿ ಸೌಮ್ಯ ರಮೇಶ್ ತವರು ಮನೆಯ ಸಹಾಯದಿಂದ ರಾಜಕೀಯಕ್ಕೆ ಬರೋದು ಬಹುತೇಕ ಖಚಿತವಾಗುತ್ತಿದೆ.

ಮುಂದಿನ ದಿನಗಳಲ್ಲಿ ಚುನಾವಣಾ ರಾಜಕಾರಣದಿಂದ ದೂರ ಉಳಿಯಲು ಸಚಿವ ತಮ್ಮಣ್ಣ ಈಗಾಗಲೆ ನಿರ್ಧರಿಸಿದ್ದಾರೆ. ರಾಜಕೀಯ ಮಹತ್ವಕಾಂಕ್ಷೆ ಇರುವ ಡಾ.ಸೌಮ್ಯ ತಂದೆಯಿಂದ ಖಾಲಿಯಾಗುವ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಮದ್ದೂರಿನಲ್ಲಿ ಜೆಡಿಎಸ್ ಪಾಳಯದಲ್ಲು ಡಾ.ಸೌಮ್ಯರವರ ಹೆಸರು ದೊಡ್ಡ ಮಟ್ಟದಲ್ಲಿ ಚರ್ಚೆಯಾಗತೊಡಗಿದೆ. ದೇವೇಗೌಡರ ಕುಟುಂಬದ ಸೊಸೆ ಅಂತ ರಾಜಕೀಯ ಎಂಟ್ರಿ ಕಷ್ಟ ಅನ್ನೋ ಕಾರಣಕ್ಕೆ ಡಿ.ಸಿ.ತಮ್ನಣ್ಣರ ಪುತ್ರಿ ಅನ್ನುವುದನ್ನೆ ಟ್ರಂಪ್ ಕಾರ್ಡ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾತು ಜೆಡಿಎಸ್ ವಲಯದಲ್ಲಿ ಜೋರಾಗೆ ಕೇಳಿ ಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *