ಜಿಲ್ಲಾಧಿಕಾರಿಗಳ ಗೃಹ ಕಚೇರಿಯ ಕಂಪ್ಯೂಟರ್ ನಾಪತ್ತೆ!

Public TV
1 Min Read

ರಾಯಚೂರು: ಜಿಲ್ಲಾಧಿಕಾರಿ ಬಿ.ಶರತ್ ಅವರ ಗೃಹ ಕಚೇರಿಯಲ್ಲಿದ್ದ ಕಂಪ್ಯೂಟರ್ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು, ಈ ಹಿಂದಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಬಳಸುತ್ತಿದ್ದ ಕಂಪ್ಯೂಟರ್ ನಾಪತ್ತೆಯಾಗಿದೆ. ಹಲವಾರು ಮಹತ್ವದ ದಾಖಲೆಗಳು ಇರಬಹುದಾದ ಜಿಲ್ಲಾಧಿಕಾರಿಗಳ ಗೃಹ ಕಚೇರಿ ಕಂಪ್ಯೂಟರ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇತ್ತೀಚೆಗೆ ವರ್ಗಾವಣೆಯಾಗಿ ಬಂದಿದ್ದ ನೂತನ ಜಿಲ್ಲಾಧಿಕಾರಿ ಶರತ್ ಕಂಪ್ಯೂಟರ್ ಬಗ್ಗೆ ಸಿಬ್ಬಂದಿಗಳ ಹತ್ತಿರ ವಿಚಾರಿಸಿದಾಗ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ ಗೃಹ ಕಚೇರಿಗೆ ಬಣ್ಣ ಬಳಿದಿರುವುದರಿಂದ, ಕಂಪ್ಯೂಟರ್ ಅನ್ನು ಎಲ್ಲಾದರೂ ತೆಗೆದಿಟ್ಟಿರಬಹುದು ಎಂದು ಬಿ.ಶರತ್ ಹೇಳಿದ್ದರು. ಆದರೆ ನವೆಂಬರ್ 5 ರಿಂದಲೂ ಕಂಪ್ಯೂಟರ್ ನಾಪತ್ತೆಯಾಗಿದ್ದು, ಪತ್ತೆಯಾಗಿಲ್ಲ. ಹೀಗಾಗಿ ಸರ್ಕಾರದ ಆಸ್ತಿ ಕಳ್ಳತನವಾದ ಹಿನ್ನೆಲೆಯಲ್ಲಿ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಡಿಸಿ ಆಪ್ತಸಹಾಯಕ ದೂರು ದಾಖಲಿಸಿದ್ದಾರೆ.

ಪ್ರತಿ ಜಿಲ್ಲಾಧಿಕಾರಿ ವರ್ಗಾವಣೆಯಾಗಿ, ಹೊಸ ಅಧಿಕಾರಿ ಬರುವ ವೇಳೆಯೊಳಗೆ ಬಂಗಲೆಯಲ್ಲಿನ ವಸ್ತುಗಳು ನಾಪತ್ತೆಯಾಗುತ್ತಲೇ ಇರುತ್ತವೆ ಎಂಬ ಮಾತುಗಳು ಸಹ ಕೇಳಿಬಂದಿದೆ. ಕಂಪ್ಯೂಟರ್ ನಾಪತ್ತೆ ಪ್ರಕರಣದಲ್ಲಿ ಡಿಸಿ ಬಂಗಲೆ ಕೆಲಸಗಾರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *