ಸೌಂದರ್ಯ ಜಗದೀಶ್ ಕುಟುಂಬದಿಂದ 3ನೇ ದಿನದ ಕಾರ್ಯ

Public TV
1 Min Read

ರಡು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ (suicide) ಶರಣಾಗಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಅವರ ಸಮಾಧಿಗೆ 3ನೇ ದಿನವಾದ ಇಂದು ಹಾಲು ತುಪ್ಪು  (Haalu Tuppa) ಕಾರ್ಯವನ್ನು ಅವರ ಕುಟುಂಬಸ್ಥರು ಇಂದು ನೆರವೇರಿಸಲಿದ್ದಾರೆ. ಹಾಲು ತುಪ್ಪ ಕಾರ್ಯಕ್ಕಾಗಿ ಸಮಾಧಿ ಸ್ಥಳಕ್ಕೆ ಕುಟುಂಬಸ್ಥರು ತೆರಳಿದ್ದಾರೆ.

ಜಗದೀಶ್ ಪತ್ನಿ ಶಶಿರೇಖ ಹಾಗೂ ಪುತ್ರ ಸ್ನೇಹಿತ್ ಹಾಗೂ ಕುಟುಂಬದ ಸದಸ್ಯರು ಹಿರಿಸಾವೆಗೆ ತೆರಳಿದ್ದು, 3ನೇ ದಿನದ ಕಾರ್ಯವನ್ನು ಪೂರೈಸಲಿದ್ದಾರೆ. ರವಿವಾರ ಬೆಳ್ಳಂಬೆಳಗ್ಗೆ ಆತ್ಮಹತ್ಯೆಗೆ ಶರಣಾಗುವ ಮೂಲಕ ಇಡೀ ಕುಟುಂಬಕ್ಕೆ ಶಾಕ್ ನೀಡಿದ್ದರು ಸೌಂದರ್ಯ ಜಗದೀಶ್. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ, ಅಭಿಮಾನಿಗಳಲ್ಲ ಅಪಾರ ದುಃಖ ತಂದಿತ್ತು.

 

ಸಿನಿಮಾ ಮತ್ತು ನಾನಾ ಉದ್ಯಮಗಳಲ್ಲಿ ತೊಡಗಿಕೊಂಡಿದ್ದ ಸೌಂದರ್ಯ ಜಗದೀಶ್, ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕುಟುಂಬ ಪೊಲೀಸರ ಮುಂದೆ ಹೇಳಿರುವ ಹೇಳಿಕೆಯಲ್ಲಿ ಜಗದೀಶ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಂತೆ.

Share This Article