ಆಸ್ಪತ್ರೆಯಲ್ಲಿ ಬಾಣಂತಿ ಸಾವು- ಸಿಬ್ಬಂದಿ ಮೇಲೆ ಸಂಬಂಧಿಗಳಿಂದ ಹಲ್ಲೆ

Public TV
1 Min Read

ದಾವಣಗೆರೆ: ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ನಿವಾಸಿ ಷರೀಪ್ ಬಾನು ಎಂಬವರು ಹೆರಿಗೆಗೆಂದು ಭಾನುವಾರ ದಾವಣಗೆರೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರದಂದು ಷರೀಪ್ ಬಾನು ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇಂದು ಬೆಳಗಿನ ಜಾವ ಆಸ್ಪತ್ರೆಯ ಸಿಬ್ಬಂದಿ ಷರೀಪ್ ಬಾನು ರವರಿಗೆ ಚುಚ್ಚುಮದ್ದನ್ನು ನೀಡಿದ್ದು, ಅದರ ಪರಿಣಾಮದಿಂದ ಬಾಣಂತಿ ತೀವ್ರ ಅಸ್ವಸ್ಥರಾಗಿದ್ದರು. ಅಲ್ಲದೇ ಕೆಲ ಸಮಯದ ನಂತರ ಷರೀಪ್ ಬಾನು ಮೃತಪಟ್ಟಿದ್ದಾರೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.

ಬಾಣಂತಿ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಗಳು ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗಾಂಧಿನಗರ ಪೊಲೀಸರು ಬೇಟಿ ಆಸ್ಪತ್ರೆಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

https://www.youtube.com/watch?v=hMQnjs7LwZY

Share This Article
Leave a Comment

Leave a Reply

Your email address will not be published. Required fields are marked *