ಭಂಡ ನಾನು, ಯಾವ ಸರ್ಕಾರ ಇರಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ: ರೇಣುಕಾಚಾರ್ಯ

Public TV
1 Min Read

ದಾವಣಗೆರೆ: ಭಂಡ ನಾನು, ಯಾವ ಸರ್ಕಾರ ಇರಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಇಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಚಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ಸರ್ಕಾರವಿರಲಿ ಅಭಿವೃದ್ಧಿ ಮುಖ್ಯ. ಈಗ ನಮ್ಮ ಸರ್ಕಾರ ಬಂದಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದರು.

ಈ ಹಿಂದೆ 2012 ರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರು ಮುಖ್ಯಮಂತ್ರಿಯಾಗಿದ್ದಾಗ ಹೊನ್ನಾಳಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದೆ. ಈಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸರ್ಕಾರವಿದೆ. ಈ ಸರ್ಕಾರದಲ್ಲಿ ನ್ಯಾಮತಿಯನ್ನು ಅಭಿವೃದ್ಧಿ ಮಾಡುವ ಪಣ ತೊಟ್ಟಿದ್ದೇನೆ. ನ್ಯಾಮತಿ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ತಾಲೂಕು ಅಡಳಿತ ನೆರೆ ಸಂತ್ರಸ್ತರಿಗಾಗಿ 8 ಲಕ್ಷ ರೂಪಾಯಿ ನಗದು, ಅಕ್ಕಿ ಹಾಗೂ ಸೀರೆ ಸಂಗ್ರಹಿಸಿತ್ತು. ಈ ಸಾಮಗ್ರಿಗಳನ್ನು ತುಂಬಿದ ಟ್ರ್ಯಾಕ್ಟರನ್ನು ತಾಲೂಕು ಕಚೇರಿ ಎದುರು ರೇಣುಕಾಚಾರ್ಯ ಚಲಾಯಿಸಿ ಚಾಲನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *