ದಾವಣಗೆರೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಧನದಾಹಕ್ಕಿಲ್ಲ ಕೊನೆ- ದುಡ್ಡು ಕೊಡದಿದ್ರೆ ಬಾಣಂತಿಯರಿಗಿಲ್ಲ ಹಾಸಿಗೆ

Public TV
1 Min Read

ದಾವಣಗೆರೆ: ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಜೀವಾಂಮೃತವಿದ್ದಂತೆ. ಅಲ್ಲಿ ಹೋದ್ರೆ ನಮಗೆ ಒಳಿತು ಆಗುತ್ತೆ ಎಂಬ ನಂಬಿಕೆ ಅಲ್ಲಿಗೆ ಬಂದಂತಹ ರೋಗಿಗಳದ್ದು, ಜಿಲ್ಲೆಯ ಆಸ್ಪತ್ರೆಯಲ್ಲಿ ರೋಗಿಗಳನ್ನ ನಾಯಿಗಳಿಗಿಂತಲು ಕೀಳಾಗಿ ಕಾಣುತ್ತಾರೆ. ಅಲ್ಲದೆ ಅವರಿಗೆ ಯಾವುದೇ ಸವಲತ್ತು ನೀಡದೆ ಬದುಕಿರುವಾಗಲೆ ನರಕ ತೋರಿಸುತ್ತಾರೆ.

ಹೌದು. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಯಿಂದ ಹೊರಬಂದು ಮಲಗಿದ ಗರ್ಭಿಣಿ, ಇನ್ನೊಂದೆಡೆ ಬಾಣಂತಿಯರು ತಮ್ಮ ಹಸುಗೂಸನ್ನ ತೊಡೆಮೇಲೆ ಮಲಗಿಸಿಕೊಂಡು ನೆಲದ ಮೇಲೆ ಕುಳಿತಿರುತ್ತಾರೆ. ಈಗಾಗಲೇ ಹಲವು ಅವಾಂತರಗಳಿಂದ ಕುಖ್ಯಾತಿ ಗಳಿಸಿದ್ದ ಈ ಆಸ್ಪತ್ರೆ ಇದೀಗ ಪುನಃ ತನ್ನ ಎಡವಟ್ಟಿನಿಂದ ಸುದ್ದಿಯಾಗಿದೆ. ಆಸ್ಪತ್ರೆಗೆ ಬರೋ ಗರ್ಭಿಣಿಯರಿಗೆ, ಬಾಣಂತಿಯರಿಗೆ ದುಡ್ಡು ಕೊಟ್ರೆ ಮಾತ್ರವೇ ಬೆಡ್ ಕೊಡಲಾಗ್ತಿದೆ. ಹಣ ಕೊಡದಿದ್ರೆ, ಹೆರಿಗೆಯಾದ ಬಾಣಂತಿಯರಿಗೆ ಯಾವುದೇ ಸೌಲಭ್ಯ ನೀಡದೇ ಹೀನಾಯವಾಗಿ ಕಾಣ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಆಸ್ಪತ್ರೆಯಿಂದಲೇ ಹೊರಹಾಕ್ತಾರೆ ಅಂತ ಯುವ ಶಕ್ತಿ ವೇದಿಕೆಯ ರಾಜು ಆರೋಪಿಸಿದ್ದಾರೆ.

ಈ ಬಗ್ಗೆ ಗರ್ಭಿಣಿಯರು ಹಿರಿಯ ವೈದ್ಯಾಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಬೆಡ್ ಬೇಕಾದ್ರೆ ದುಡ್ಡು ಕೊಡ್ಬೇಕು. ಇಲ್ಲವಾದ್ರೆ ನೆಲದ ಮೇಲೆಯೇ ಚಿಕಿತ್ಸೆಪಡೀಬೇಕಾದ ಪರಿಸ್ಥಿತಿ ರೋಗಿಗಳದ್ದಾಗಿದೆ.

ಒಟ್ಟಿನಲ್ಲಿ ಬಡವರಿಗೆ ಅನುಕೂಲವಾಗಲಿ ಅಂತ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿದ್ರೆ, ಈ ವೈದ್ಯರು ಮತ್ತು ಸಿಬ್ಬಂದಿ ತಮ್ಮದೇ ಆಸ್ಪತ್ರೆ ಎನ್ನುವಂತೆ ದುರಂಹಕಾರ ತೋರಿಸ್ತಿದ್ದಾರೆ. ಇನ್ನಾದ್ರೂ ಈ ಧನದಾಹಿ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ತಾರಾ ಅಂತ ಕಾದು ನೋಡ್ಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *