ನನ್ನ ಹಣ ಕೊಡಿ ಎಂದಿದ್ದಕ್ಕೆ ನಿವೃತ್ತ ಪೊಲೀಸ್ ಅಧಿಕಾರಿಯ ಪುತ್ರಿಯ ಮೇಲೆ ಗ್ಯಾಂಗ್ ರೇಪ್

Public TV
1 Min Read

– ಸಂತ್ರಸ್ತೆಯನ್ನ ರಸ್ತೆ ಬದಿ ಎಸೆದ ಕಾಮುಕರು

ಲಕ್ನೋ: ನನ್ನ ಹಣ ವಾಪಸ್ ಕೊಡಿ ಎಂದು ಕೇಳಲು ಹೋಗಿದ್ದ ನಿವೃತ್ತ ಪೊಲೀಸ್ ಅಧಿಕಾರಿಯ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಅತ್ಯಾಚಾರ ಸಂತ್ರಸ್ತೆಯ ಮಲಿಹಾಬಾನ್ ನಿವಾಸಿಯಾಗಿದ್ದು, ಪೊಲೀಸ್ ಅಧಿಕಾರಿ 2013ರಲ್ಲಿ ನಿವೃತ್ತರಾಗಿದ್ದಾರೆ. ಬಬ್ಲೂ, ಕಾಶಿರಾಮ್, ಜೆಕೆ ಗುಪ್ತಾ ಮತ್ತು ಹರೀಶ್ ಅತ್ಯಾಚಾರ ಎಸಗಿದ ಕಾಮುಕರು.

ಆಗಿದ್ದೇನು?:
ಆರೋಪಿಗಳಾದ ಬಬ್ಲೂ ಹಾಗೂ ಕಾಶಿರಾಮ್ ಅತ್ಯಾಚಾರ ಸಂತ್ರಸ್ತೆಗೆ ಉದ್ಯೋಗ ಕೊಡಿಸುವುದಾಗಿ ಹೇಳಿ 50 ಸಾವಿರ ರೂ. ಪಡೆದಿದ್ದರು. ಹಣ ಪಡೆದು ಒಂದು ವರ್ಷ ಕಳೆದರೂ ಉದ್ಯೋಗ ಕೊಡಿಸಿರಲಿಲ್ಲ. ಹೀಗಾಗಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಳು.

ನೀನು ಲಕ್ನೋ ಸಮೀಪದ ವಿಭೂತಿ ಖಾಂಡ್‍ಗೆ ಬಂದರೆ ಹಣ ನೀಡುತ್ತೇವೆ ಎಂದು ಬಬ್ಲೂ ಹಾಗೂ ಕಾಶಿರಾಮ್ ಹೇಳಿದ್ದರು. ಅವರ ಮಾತಿನಂತೆ ಗುರುವಾರ ನಾನು ಅಲ್ಲಿಗೆ ಹೋಗಿದ್ದೆ. ಈ ವೇಳೆ ಬಬ್ಲೂ ಹಾಗೂ ಕಾಶಿರಾಮ್ ಕಾರಿನಲ್ಲಿ ಕೂರುವಂತೆ ತಿಳಿಸಿದ್ದರು. ನಾನು ಕಾರಿನಲ್ಲಿ ಕೂರುತ್ತಿದ್ದಂತೆ ಅವರ ಇಬ್ಬರು ಸ್ನೇಹಿತರು ಕಾರಿನಲ್ಲಿ ಬಂದು ಕುಳಿತರು. ಬಳಿಕ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸುಮಾರು ಒಂದು ಗಂಟೆಯ ಬಳಿಕ ತಾಲಿಬಾಘ್ ರಸ್ತೆಯ ಮೇಲೆ ಎಸೆದು ಪರಾರಿಯಾದರು ಎಂದು ಸಂತ್ರಸ್ತೆ ದೂರಿದ್ದಾಳೆ.

ಈ ಸಂಬಂಧ ಲಕ್ನೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *