ಕಾಡಿನತ್ತ ಹೊರಟ ದಸರಾ ಗಜಪಡೆ-ವಿಶೇಷ ಗೌರವದೊಂದಿಗೆ ಆನೆಗಳಿಗೆ ಬೀಳ್ಕೊಟ್ಟ ಅರಮನೆ ಸಿಬ್ಬಂದಿ

Public TV
1 Min Read

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಜಂಬೂಸವಾರಿಯ ಆನೆಗಳು ಕಾಡಿನತ್ತ ಪ್ರಯಾಣ ಬೆಳೆಸಿವೆ.

ಅದ್ಧೂರಿಯಾಗಿ ದಸರಾ ಜಂಬೂಸವಾರಿಯನ್ನು ನಡೆಸಿಕೊಟ್ಟಿದ್ದ ಕ್ಯಾಪ್ಟನ್ ಅರ್ಜುನ್ ಅಂಡ್ ಟೀಂನ ಆನೆಗಳು ಇಂದು ಕಾಡಿನತ್ತ ಪ್ರಯಾಣ ಬೆಳೆಸಿವೆ. ಆನೆಗಳಿಗೆ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ವಿಶೇಷ ಪೂಜೆ ನೇರವೇರಿದ್ದು, ಮಾವುತರು ಸೇರಿದಂತೆ ಕಾವಾಡಿಗರಿಗೆ ವಿಶೇಷ ಗೌರವ ನೀಡಿ ಬೀಳ್ಕೊಡಲಾಯಿತು.

ಸೋಮವಾರ ಅರಮನೆಯಲ್ಲಿ ರಾಜಮನೆತನದ ದಸರಾದ ಅಂತಿಮ ಆಚರಣೆ ಹಿನ್ನೆಲೆಯಲ್ಲಿ ಮೂರು ಆನೆಗಳನ್ನು ಅರಮನೆಯಲ್ಲೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ವಿಕ್ರಂ, ಗೋಪಿ ಹಾಗೂ ವಿಜಯ ಆನೆಗಳು ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಫ್ ಸಿದ್ದರಾಮಪ್ಪ, ರಾಜಮನೆತನದವರಿಂದ ಪೂಜಾ ಕಾರ್ಯಕ್ರಮದ ನಿಮಿತ್ತ ಮೂರು ಆನೆಗಳನ್ನು ಅರಮನೆಯಲ್ಲೇ ಉಳಿಸಿಕೊಂಡು, ಇನ್ನುಳಿದ 9 ಆನೆಗಳು ವಿಶೇಷ ಲಾರಿಗಳಲ್ಲಿ ಕಾಡಿನತ್ತ ಪ್ರಯಾಣ ಬೆಳಸಲಿವೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *