50ಕ್ಕೂ ಹೆಚ್ಚು ಜನರ ತಲೆ ಮೇಲೆ ತೆಂಗಿನಕಾಯಿ ಒಡೆದು ದಸರಾ ಆಚರಣೆ

Public TV
1 Min Read

ಕೋಲಾರ : ಜಿಲ್ಲೆಯ ಕೆಜಿಎಫ್‌ ತಾಲೂಕಿನಲ್ಲಿ ವಿಜಯದಶಮಿ ಪ್ರಯಕ್ತ ತಲೆಯ ಮೇಲೆ ತೆಂಗಿನ ಕಾಯಿ (Coconut) ಒಡೆಯುವ ದಸರಾ (Dasara) ಮಹೋತ್ಸವದ ಪೂಜಾ ಕೈಂಕರ್ಯಗಳು ನೆರವೇರಿದವು.

ಕೋಲಾರ (Kolar) ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದ ತಾತೇನಹಳ್ಳಿ ಬಳಿ ಇರುವ ಅಜ್ಜ ಬೀರೇಶ್ವರ ಸ್ವಾಮಿ‌ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಪ್ರತಿ ವರ್ಷದಂತೆ ವಿಜಯದಶಮಿ ಪ್ರಯುಕ್ತ ಭಕ್ತರು ತಲೆಯ ಮೇಲೆ ತೆಂಗಿನ ಕಾಯಿ ಒಡೆಸಿಕೊಳ್ಳುವ ಮೂಲಕ ತಮ್ಮ ಶಕ್ತಿಯನ್ನ ಪ್ರದರ್ಶಿಸುತ್ತಾರೆ‌. ಅದರಂತೆ ಸುಮಾರು 50ಕ್ಕೂ ಹೆಚ್ಚು ಜನರು ತಲೆಯ ಮೇಲೆ ತೆಂಗಿನಕಾಯಿ ಒಡೆಸಿಕೊಳ್ಳುವ ಮೂಲಕ ಅಜ್ಜಬೇರೇಶ್ವರ ದೇವರಿಗೆ ತಮ್ಮ ಭಕ್ತಿಯನ್ನ ಸಮರ್ಪಿಸಿದರು‌. ಇದನ್ನೂ ಓದಿ: ಚುನಾವಣೆಗೆ ಟಿಆರ್‌ಎಸ್‌ ಜೊತೆ ಜೆಡಿಎಸ್‌ ಮೈತ್ರಿ – ಎಚ್‌ಡಿಕೆ ಅಧಿಕೃತ ಘೋಷಣೆ

ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು. ತೆಂಗಿನ ಕಾಯಿ ಒಡೆಯುವುದು ನೋಡಲು ಸಾಕಷ್ಟು ಜನರು ನೆರೆದಿದ್ದರು. ಇನ್ನು ವಿವಿಧೆಡೆಯಿಂದ ಕುರುಬ ಸಮುದಾಯದವರು ಪ್ರತಿವರ್ಷ ಈ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದನ್ನೂ ಓದಿ: ಸೊಂಡಿಲು ಗಾಯದಿಂದ ಬಳಲುತ್ತಿರುವ ಮರಿಯಾನೆ- ಬೊಮ್ಮಾಯಿಗೆ ರಾಹುಲ್ ಗಾಂಧಿ ಪತ್ರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *