ನಾಡಿನಿಂದ ಕಾಡಿನತ್ತ ಹೊರಟಿತು ದಸರಾ ಆನೆಗಳು

Public TV
1 Min Read

ಮೈಸೂರು: ದಸರಾ ಹಬ್ಬಕ್ಕಾಗಿ ಕಾಡಿನಿಂದ ಮೈಸೂರು ಅರಮನೆಗೆ ಬಂದಿದ್ದ, ಗಜಪಡೆಗೆ ಪೂಜೆ ಸಲ್ಲಿಸಿ ನಾಡಿನಿಂದ ಬೀಳ್ಕೊಡಲಾಯಿತು.

407 ನೇ ದಸರಾ ಹಬ್ಬಕ್ಕಾಗಿ ಒಂದು ತಿಂಗಳ ಹಿಂದೆ ಕಾಡಿನಿಂದ ಮೈಸೂರು ಅರಮನೆಗೆ ಗಜಪಡೆಯನ್ನು ಕರೆಸಲಾಗಿತ್ತು. ನಂತರ ಯಶಸ್ವಿಯಾಗಿ ವಿಜಯದಶಮಿಯ ಮೆರವಣಿಗೆ ಮುಗಿಸಿದ ಬಳಿಕ ಗಜಪಡೆಯನ್ನು ಮಂಗಳವಾರ ಕಾಡಿಗೆ ಕಳುಹಿಸಲಾಯಿತು.

ಗಜಪಡೆಗೆ ಮೈಸೂರಿನ ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸಿ ಆನೆಗಳನ್ನು ಒಂದೊಂದಾಗಿ ಲಾರಿಗೆ ಹತ್ತಿಸಿ, ಆ ಆನೆಗಳ ಕ್ಯಾಂಪ್ ಗೆ ಕಳುಹಿಸಲಾಯಿತು.

ನಂತರ 15 ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ಜಿಲ್ಲಾಡಳಿತದಿಂದ ಗೌರವಧನ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಶಾಸಕ ಎಂ.ಕೆ. ಸೋಮಶೇಖರ್, ಅರಣ್ಯ ಇಲಾಖೆ ಆಧಿಕಾರಿಗಳು ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *