ಮೂರು ತಿಂಗಳಲ್ಲಿ ದರ್ಶನ್‌ ಬಿಡುಗಡೆ ಆಗ್ತಾರೆ – ಬೀರಲಿಂಗೇಶ್ವರ ದೈವ ಭವಿಷ್ಯವಾಣಿ

Public TV
1 Min Read

ಬಳ್ಳಾರಿ: ಕೊಲೆ ಆರೋಪಿ ದರ್ಶನ್‌ ಬಿಡುಗಡೆಗಾಗಿ ಅವರ ಅಭಿಮಾನಿಗಳು (Darshan Fans) ಫೋಟೋ ಹಿಡಿದು ದೈವದ ಮೊರೆ ಹೋಗಿರುವ ಸನ್ನಿವೇಶ ಬಳ್ಳಾರಿ (Bellary) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಬಳ್ಳಾರಿಯ ಬಲಕಲ್ ಅನ್ನೋ ಗ್ರಾಮದ ಬೀರಲಿಂಗೇಶ್ವರ (Beeralingeshwara God) ದೈವದ ಬಳಿ ದರ್ಶನ್ ಬಿಡುಗಡೆ ಅಭಿಮಾನಿಗಳು ದಿನಾಂಕ ಕೇಳಿದ್ದಾರೆ. ಈ ವೇಳೆ ಮೂರು ತಿಂಗಳ ಬಳಿಕ ದರ್ಶನ್ ಹೊರ ಬರ್ತಾರೆ ಅಂತಾ ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿದೆ. ದರ್ಶನ್ ಭಾವಚಿತ್ರದ ಮೇಲೆ ತಲೆಯಿಟ್ಟು ದೈವ ನುಡಿದ ಮಾತಿನ ವೀಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ದರ್ಶನ್ ಬಿಡುಗಡೆ ಬಗ್ಗೆ ದೈವ ಹೇಳಿದ ಮಾತಿನ ವಿಡಿಯೋ ಮಾಡಿ ಅಭಿಮಾನಿಗಳು ತಮ್ಮ ಇನ್‌ಸ್ಟಾ ಖಾತೆಯಲ್ಲೂ ಜಂಚಿಕೊಂಡಿದ್ದಾರೆ.

ಇಂದು ಪತ್ನಿ ವಿಜಯಲಕ್ಷ್ಮಿ ಭೇಟಿ:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಭೇಟಿಗೆ ಗುರುವಾರ (ಇಂದು) ಪತ್ನಿ ವಿಜಯಲಕ್ಷ್ಮಿ (Vijayalakshmi) ಮತ್ತೆ ಬಳ್ಳಾರಿ ಜೈಲಿಗೆ ಬರಲಿದ್ದಾರೆ. ಸಂಜೆ 4.30ಕ್ಕೆ ಬರುವುದಾಗಿ ವಿಜಯಲಕ್ಷ್ಮಿ ಅವರು ಜೈಲು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸಂಜೆ 4.30 ರಿಂದ 5.30ರ ವರೆಗೆ ಜೈಲಿನಲ್ಲಿರುವ ಖೈದಿಗಳ ಸಂದರ್ಶನಕ್ಕೆ ಭೇಟಿಯ ಸಮಯವಿರುತ್ತದೆ. ಹೀಗಾಗಿ ನಿಯಮಗಳ ಪ್ರಕಾರ ಒಬ್ಬ ಕೈದಿ ಆರ್ಧ ಗಂಟೆ ಸಂಬಂಧಿಕರ ಜೊತೆಗೆ ಮಾತನಾಡಬಹುದು. ಹೀಗಾಗಿ ಆರೋಪಿ ದರ್ಶನ್ ಪತ್ನಿಯೂ ಅದೇ ಸಮಯದಲ್ಲಿ ಬರಲಿದ್ದಾರೆ.

Share This Article