ಮಂಡ್ಯ ಜನರ ಪ್ರೀತಿಗೆ ಸದಾ ಚಿರಋಣಿ: ನಟ ದರ್ಶನ್

Public TV
1 Min Read

ಬೆಂಗಳೂರು: ಸುಮಲತಾ ಅಂಬರೀಶ್ ಅಮ್ಮ ಅವರ ಅಭೂತಪೂರ್ವ ಗೆಲುವಿಗೆ ಕಾರಣರಾದ ಮಂಡ್ಯದ ಆತ್ಮೀಯ ಮತದಾರ ಬಂಧುಗಳೆ ಮತ್ತು ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದು ನಟ ದರ್ಶನ್ ತಿಳಿಸಿದ್ದಾರೆ.

ಮಂಡ್ಯ ಜನತೆಗೆ ಧನ್ಯವಾದ ತಿಳಿಸಿ ವಿಡಿಯೋ ಟ್ವೀಟ್ ಮಾಡಿರುವ ದರ್ಶನ್, ಮಂಡ್ಯ ಲೋಕಸಭಾ ಜನತೆ ತೋರಿಸುವ ಜನತೆಯ ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇನೆ. ಅಂದು ಒಂದೇ ಮಾತು ಹೇಳಿದ್ದು, ಈಗಲೂ ಅದನ್ನೇ ಹೇಳುತ್ತೇನೆ. ಸಾವಯುವವರೆಗೂ ನಿಮ್ಮ ಋಣದಲ್ಲಿ ಇರುತ್ತೇವೆ ಎಂದಿದ್ದಾರೆ.

ನಾವು ಮಾಡಿದ ಸಣ್ಣ ಅಳಿಲು ಸೇವೆಗೆ ಇಷ್ಟು ಬಹುಮತ ನೀಡಿ ಗೆಲ್ಲಿಸಿಕೊಂಡು ಬಂದ್ದಿದ್ದೀರಿ. ನಮ್ಮ ಪಾಲಿಗೆ ನೀವು ದೇವರ ರೀತಿ ಆಗಿದ್ದು, ಧನ್ಯವಾದ ಎಂದು ಹೇಳಿದರೆ ಅದು ತುಂಬಾ ಸಣ್ಣ ಪದ ಆಗುತ್ತದೆ. ಪ್ರತಿ ಸಣ್ಣ ಹಳ್ಳಿಯಲ್ಲಿಯೂ ನೀವು ತೋರಿದ ಪ್ರೀತಿ ಸ್ಮರಣೀಯವಾದದ್ದು, ಮುಂದಿನ 5 ವರ್ಷದ ಅವಧಿಯಲ್ಲಿ ಸುಮಲತಾ ಅವರು ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ. ಮಂಡ್ಯ ಲೋಕಸಭಾ ವ್ಯಾಪ್ತಿಯ ಎಲ್ಲಾ ಜನರಿಗೂ ಸಾಷ್ಟಾಂಗ ನಮಸ್ಕಾರಗಳು, ಅಮ್ಮ ನಿಮ್ಮ ಪ್ರೀತಿಯನ್ನು ಕಾಪಾಡಿಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *