– ಹಾಸಿಗೆ ವಿಚಾರಕ್ಕೆ ಮತ್ತೆ ಕೋರ್ಟ್ ಮೆಟ್ಟಿಲೇರಿದ ದರ್ಶನ್; ಇಂದು ಅರ್ಜಿ ವಿಚಾರಣೆ
ಬೆಂಗಳೂರು: ಜೈಲಿನಲ್ಲಿ ಹಾಸಿಗೆ, ದಿಂಬು ವಿಚಾರಕ್ಕೆ ನಟ ದರ್ಶನ್ (Darshan) ಕೋರ್ಟ್ ಮೆಟ್ಟಿಲೇರಿದ್ದು, ಇಂದು ಅರ್ಜಿ ವಿಚಾರಣೆ ನಡೆಯಲಿದೆ.
ಕೊಲೆ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ದರ್ಶನ್ ಕೆಲ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಳೆದ ವಾರ ಮೂಲ ಸೌಕರ್ಯ ನೀಡಿ, ಜೈಲಿನ ಮ್ಯಾನ್ಯುಯಲ್ ಪ್ರಕಾರ ಅಂತ ಕೋರ್ಟ್ ಆದೇಶ ಮಾಡಿತ್ತು. ಅದೇ ರೀತಿ ಜೈಲಿನ ಅಧಿಕಾರಿಗಳು ಜಮ್ಖಾನ, ದಿಂಬು ಕಲ್ಪಿಸಿದೆ. ಜೊತೆಗೆ ವಾಕಿಂಗ್ಗೆ ಅವಕಾಶ ನೀಡಿದೆ. ಇದರಿಂದ ಕುಪಿತರಾದ ದರ್ಶನ್ ಮತ್ತೆ ಕೋರ್ಟ್ಗೆ ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಹೇಳಿದ್ರೂ ಹಾಸಿಗೆ ಕೊಟ್ಟಿಲ್ಲ ಅಂತ ಮತ್ತೆ ಕೋರ್ಟ್ಗೆ ಹೋಗಿದ್ದಾರೆ. ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಜೈಲು ಸೇರಿ ತಿಂಗಳಾದ್ರೂ ಕ್ವಾರಂಟೈನ್ ಸೆಲ್ನಲ್ಲಿ ಇಟ್ಟಿದ್ದಾರೆಂದು ದೂರಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶ ಬಳಿಕ ದರ್ಶನ್ಗೆ ರಿಲ್ಯಾಕ್ಸ್ – ದಿಂಬು, ಚಾಪೆ ಜೊತೆಗೆ ಎರಡು ಜಮ್ಖಾನ ನೀಡಿದ ಅಧಿಕಾರಿಗಳು
ಅರ್ಜಿ ಸಲ್ಲಿಸಿದ ಬಳಿಕ ಸುನೀಲ್ ವಾದ ಮಂಡಿಸಿ, ದರ್ಶನ್ ಜೈಲು ಸೇರಿ ಒಂದು ತಿಂಗಳು ಕಳೆದು ಹೋಗಿದೆ. ಇನ್ನೂ ಅವರನ್ನು ಕ್ವಾರಂಟೈನ್ ಸೆಲ್ನಲ್ಲಿ ಇರಿಸಿದ್ದಾರೆ. 14 ದಿನಗಳ ಕಾಲ ಮಾತ್ರ ಕ್ವಾರಂಟೈನ್ ಸೆಲ್ನಲ್ಲಿ ಇರಿಸಬೇಕು. ಇನ್ನು ಬಿಸಿಲಿನ ವಿಚಾರಕ್ಕೆ ಸೂರ್ಯನನ್ನು ತರೋದಕ್ಕೆ ಆಗುತ್ತಾ ಅಂತ ಹಾರಿಕೆ ಉತ್ತರ ಕೊಡ್ತಾರೆ. ಹಾಸಿಗೆ, ದಿಂಬು ಏನನ್ನೂ ಕೊಡ್ತಾ ಇಲ್ಲ. ತುಂಬಾ ಕನಿಷ್ಠವಾಗಿ ನಡೆಸಿಕೊಳ್ತಾ ಇದ್ದಾರೆ ಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ. ಅರ್ಜಿ ಸ್ವೀಕರಿಸಿರುವ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.
ಜೈಲಿನಲ್ಲಿ ಸರಿಯಾಗಿ ಸೌಲಭ್ಯ ಕೊಡ್ತಿಲ್ಲ. ನಾನು ಸಾಯ್ತೀನಿ, ವಿಷ ಕೊಟ್ಟುಬಿಡಿ ಎಂದು ದರ್ಶನ್ ಬೇಸರದಿಂದ ನುಡಿದಿದ್ದರು. ಇದನ್ನೂ ಓದಿ: ಮತ್ತೆ ಅನುಚಿತ ವರ್ತನೆ ತೋರಿದ್ರೆ ದರ್ಶನ್ ಬಳ್ಳಾರಿಗೆ ಶಿಫ್ಟ್ – ಐಜಿಪಿಗೆ ಅಧಿಕಾರ ಕೊಟ್ಟ ಕೋರ್ಟ್