ಮಗು ಅಂದುಕೊಂಡ್ವಿ, ಆದ್ರೆ ಈ ಮಗು ಈಗ ರೊಮ್ಯಾನ್ಸ್ ಮಾಡುತ್ತೆ: ದರ್ಶನ್

Public TV
1 Min Read

– ಅಮರ್ ಚಿತ್ರಕ್ಕೆ ಶುಭಕೋರಿದ ಸೂಪರ್ ಸ್ಟಾರ್ ರಜನಿಕಾಂತ್

ಬೆಂಗಳೂರು: ನಟ ಅಭಿಷೇಕ್ ಅಭಿನಯದ ಚೊಚ್ಚಲ `ಅಮರ್’ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರಕ್ಕಾಗಿ ಅಂಬರೀಶ್ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚಿತ್ರಕ್ಕೆ ಶುಭ ಕೋರಿದ್ದಾರೆ.

ರಜನಿಕಾಂತ್ ಅವರು ವಿಡಿಯೋದಲ್ಲಿ ಅಮರ್ ಚಿತ್ರ ಯಶಸ್ಸು ಕಾಣಲಿ ಎಂದು ಹೇಳಿ ಅಭಿಷೇಕ್ ಅವರಿಗೆ ಶುಭ ಹಾರೈಸಿದ್ದಾರೆ. ಹಾಗೆಯೇ ಮಂಡ್ಯದಲ್ಲಿ ಬುಧವಾರ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಅವರು ಕೂಡ ಶುಭ ಕೋರಿದ್ದಾರೆ.

ರಜನಿಕಾಂತ್ ಹೇಳಿದ್ದೇನು?
ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ನನ್ನ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ನಟಿಸಿದ ‘ಅಮರ್’ ಚಿತ್ರ ದೊಡ್ಡ ಯಶಸ್ಸು ಗಳಿಸಲಿ. ಅಂಬರೀಶ್ ಹೇಗೆ ಕನ್ನಡ ಜನಗಳ ಹೃದಯಲ್ಲಿ ವಿಜೃಂಭಿಸಿದ್ದನೋ, ಹಾಗೆ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಜನರ ಹೃದಯದಲ್ಲಿ ವಿಜೃಂಭಸಲಿ ಎಂದು ದೇವರ ಬಳಿ ಪ್ರಾಥಿಸುತ್ತೇನೆ ಎಂದು ರಜನಿಕಾಂತ್ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಬುಧವಾರ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನೀವೆಲ್ಲರೂ ನಮ್ಮಂತಹ ಪುಟ್ಟ-ಪುಟ್ಟ ಕಲಾವಿದರನ್ನು ಆಶೀರ್ವದಿಸಿ ಬೆಳೆಸುತ್ತಿದ್ದೀರಿ. ಮೇ 31ಕ್ಕೆ ನಮ್ಮ ಮಗು ಸಿನಿಮಾ ಬರುತ್ತಿದೆ. ಅಭಿಷೇಕ್‍ನನ್ನು ಹರಿಸಿ, ಬೆಳೆಸಿ, ಆಶೀರ್ವದಿಸಿ. ಏಕೆಂದರೆ ಇವನನ್ನು ನೋಡಿದಾಗಲೆಲ್ಲಾ ಮಗು ಎಂದು ಅನಿಸುತ್ತದೆ. ಆದರೆ ಸ್ಕ್ರೀನ್‍ನಲ್ಲಿ ರೊಮ್ಯಾನ್ಸ್ ಮಾಡುವುದನ್ನು ನೋಡಿದಾಗ ನಮಗಿಂತ ದೊಡ್ಡವನು ಆಗಿದ್ದಾನೆ ಎಂದು ಅನಿಸುತ್ತದೆ. ಹಾಗಾಗಿ ಮೇ 31ರಂದು ನನ್ನ ತಮ್ಮನ ಸಿನಿಮಾ ಬರುತ್ತಿದೆ. ನೀವೆಲ್ಲರು ಬೆಂಬಲ ನೀಡಿ ಪ್ರೋತ್ಸಾಹಿಸಿ ಅಂಬರೀಶ್ ಅಪ್ಪಾಜಿಯಂತೆ ಎತ್ತರವಾಗಿ ಬೆಳೆಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

`ಅಮರ್’ ಸಿನಿಮಾ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದಿದ್ದು, ಸಿನಿಮಾದಲ್ಲಿ ಅಭಿಷೇಕ್‍ಗೆ ಜೋಡಿಯಾಗಿ ನಟಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. `ಅಮರ್’ ಸಿನಿಮಾ ಇದೇ ತಿಂಗಳ 31 ರಂದು ತೆರೆಗೆ ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *