ಚನ್ನಪಟ್ಟಣದಲ್ಲಿ ನಿಲ್ಲದ ರಾಜಕೀಯ ದಂಗಲ್ – ಎಸ್‍ಸಿ, ಎಸ್‍ಟಿ ಅನುದಾನಕ್ಕೆ ಸಿಪಿವೈ ತಡೆ ಆರೋಪ

Public TV
1 Min Read

ರಾಮನಗರ: ಗೊಂಬೆನಾಡು ಚನ್ನಪಟ್ಟಣದಲ್ಲಿ (Channapattana) ರಾಜಕೀಯ ದಂಗಲ್ ಮುಂದುವರಿದಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P. Yogeshwar) ನಡುವಿನ ರಾಜಕೀಯ ಗುದ್ದಾಟಕ್ಕೆ ಅನುದಾನ ಖಡಿತ ಆರೋಪ ಕೇಳಿಬಂದಿದೆ.

ಸಿ.ಪಿ.ಯೋಗೇಶ್ಚರ್ ರಾಜಕೀಯ ದುರುದ್ದೇಶದಿಂದ ಎಸ್‍ಸಿ-ಎಸ್‍ಟಿ ಅನುದಾನ ತಡೆಹಿಡಿದಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. ಚನ್ನಪಟ್ಟಣ ತಾಲೂಕಿನಲ್ಲಿ ಅಂಬೇಡ್ಕರ್ ಭವನ, ಬಾಬುಜಗಜೀವನ್ ರಾಮ್ ಭವನ, ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ 5 ಕೋಟಿ ಅನುದಾನ ನೀಡಲಾಗಿತ್ತು. ಕ್ಷೇತ್ರದ ಶಾಸಕರಾದ ಹೆಚ್.ಡಿ. ಕುಮಾರಸ್ವಾಮಿಯವರು ಅನುದಾನ ಕೊಡಿಸಿದ್ದರು. ಆದರೆ ಈ ಅನುದಾನವನ್ನ ರದ್ದು ಪಡಿಸುವಂತೆ ಸಿಎಂಗೆ ಯೋಗೇಶ್ವರ್ ಪತ್ರ ಬರೆದಿದ್ದಾರೆ. ಯೋಗೇಶ್ವರ್ ಪತ್ರಕ್ಕೆ ಸಿಎಂ ಬೊಮ್ಮಾಯಿ ಕೂಡಾ ಸಹಿ ಹಾಕಿರುವುದು ಖಂಡನೀಯ ಎಂದು ದಲಿತ ಮುಖಂಡರು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ- ಬಸ್ ಮೈಮೇಲೆ ಹರಿದು ಮಹಿಳೆ ಗಂಭೀರ

ರಾಜಕೀಯ ದುರುದ್ದೇಶದಿಂದ ಸಿ.ಪಿ.ಯೋಗೇಶ್ಚರ್ ದಲಿತರಿಗೆ ಬಂದಿರುವ ಅನುದಾನಕ್ಕೆ ತಡೆ ಮಾಡುತ್ತಿದ್ದಾರೆ. ಕೂಡಲೇ ನಮ್ಮ ಅನುದಾನ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಸಿಪಿವೈ ಹಾಗೂ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Rx ಬದಲಿಗೆ ಪ್ರಿಸ್ಕ್ರಿಪ್ಷನ್‍ನಲ್ಲಿ ‘ಶ್ರೀ ಹರಿ’ ಅಂತ ಹಿಂದಿಯಲ್ಲಿ ಬರೆದ ವೈದ್ಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *