ದಿನಭವಿಷ್ಯ: 29-04-2018

Public TV
2 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಚರ್ತುದಶಿ ಉಪರಿ ಹುಣ್ಣಿಮೆ
ಭಾನುವಾರ, ಚಿತ್ತಾ ನಕ್ಷತ್ರ

ರಾಹುಕಾಲ: ಸಂಜೆ 5:03 ರಿಂದ 6:37
ಗುಳಿಕಕಾಲ: ಮಧ್ಯಾಹ್ನ 3:29 ರಿಂದ 5:03
ಯಮಗಂಡಕಾಲ: ಬೆಳಗ್ಗೆ 12:21 ರಿಂದ 1:51

ಮೇಷ: ಎಲ್ಲಿ ಹೋದರೂ ಅಶಾಂತಿ, ಆದಾಯಕ್ಕಿಂತ ಖರ್ಚು ಹೆಚ್ಚು, ಇಲ್ಲ ಸಲ್ಲದ ಅಪವಾದ, ಚಂಚಲ ಮನಸ್ಸು, ನಂಬಿದ ಜನರಿಂದ ಮೋಸ, ಉದ್ಯೋಗದಲ್ಲಿ ಬಡ್ತಿ.

ವೃಷಭ: ಅನಿರೀಕ್ಷಿತ ದ್ರವ್ಯ ಲಾಭ, ಬಂಧು ಮಿತ್ರರಲ್ಲಿ ಸ್ನೇಹವೃದ್ಧಿ, ಮಾನಸಿಕ ನೆಮ್ಮದಿ, ಸಂತಾನ ಪ್ರಾಪ್ತಿ, ವಾಹನ ಅಪಘಾತ, ಚೋರ ಭಯ, ಕುಟುಂಬದಲ್ಲಿ ಸೌಖ್ಯ, ನೆಮ್ಮದಿಯ ವಾತಾವರಣ.

ಮಿಥುನ: ಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ಭೂ ವ್ಯವಹಾರದಲ್ಲಿ ಲಾಭ, ಸ್ತ್ರೀಯರಿಗೆ ಅನುಕೂಲ, ಹಿರಿಯರಿಂದ ಸೂಕ್ತ ಸಲಹೆ, ಮಾನಸಿಕ ನೆಮ್ಮದಿ, ಸ್ನೇಹಿತರ ಭೇಟಿ, ಸುಖ ಭೋಜನ, ಹಿತ ಶತ್ರುಗಳಿಂದ ತೊಂದರೆ.

ಕಟಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸೇವಕರಿಂದ ಸಹಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಸುಖ ಭೋಜನ, ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅಗತ್ಯ, ವ್ಯರ್ಥ ಧನ ಹಾನಿ, ಆರೋಗ್ಯದಲ್ಲಿ ಏರುಪೇರು.

ಸಿಂಹ: ಕುಟುಂಬ ಸೌಖ್ಯ, ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಕಲಹ, ಅಪರಿಚಿತರ ಮಾತಿಗೆ ಮರುಳಾಗಬೇಡಿ, ಅಭಿವೃದ್ಧಿ ಕುಂಠಿತ, ಸಾಲ ಬಾಧೆ, ಸ್ಥಿರಾಸ್ತಿ ಮಾರಾಟ.

ಕನ್ಯಾ: ಆತ್ಮೀಯರ ಭೇಟಿ, ವ್ಯವಹಾರದಿಂದ ಲಾಭ, ಊರೂರು ಸುತ್ತಾಟ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವಾಹನ ರಿಪೇರಿ, ಆಕಸ್ಮಿಕ ಖರ್ಚು,  ಶತ್ರುಗಳ ಬಾಧೆ.

ತುಲಾ: ಬಂಧು ಮಿತ್ರರಲ್ಲಿ ದ್ವೇಷ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿರೋಧಿಗಳಿಂದ ಕುತಂತ್ರ, ಆಸ್ತಿ ವಿಚಾರದಲ್ಲಿ ಕಲಹ.

ವೃಶ್ಚಿಕ: ಆಧ್ಯಾತ್ಮಿಕ ವಿಚಾರದತ್ತ ಮನಸ್ಸು, ವ್ಯಾಪಾರದಲ್ಲಿ ಬೆಂಬಲ, ಕೌಟುಂಬಿಕ ಜೀವನದಲ್ಲಿ ತೃಪ್ತಿ, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಲಾಭ, ಮಾನಸಿಕ ನೆಮ್ಮದಿ.

ಧನಸ್ಸು: ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ವಿಳಂಬ, ಬಾಕಿ ವಸೂಲಿ, ಮಾತಿನಲ್ಲಿ ಹಿಡಿತ ಅಗತ್ಯ, ಭೂ ವ್ಯವಹಾರದಲ್ಲಿ ಲಾಭ, ವಿವಾದಗಳಿಂದ ದೂರವಿರಿ.

ಮಕರ: ಮನೆಯಲ್ಲಿ ಶುಭ ಕಾರ್ಯ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಚೋರಾಗ್ನಿ ಭೀತಿ, ವಾಹನ ಅಪಘಾತದಿಂದ ಪೆಟ್ಟು, ಅನ್ಯ ಜನರಲ್ಲಿ ವೈಮನಸ್ಸು.

ಕುಂಭ: ಉತ್ತಮ ಬುದ್ಧಿಶಕ್ತಿ, ಮನಸ್ಸಿನಲ್ಲಿ ನಾನಾ ರೀತಿ ಚಿಂತೆ, ಅಧಿಕ ತಿರುಗಾಟ, ಹಣಕಾಸು ತೊಂದರೆ, ಕುಟುಂಬದಲ್ಲಿ ಸಮಸ್ಯೆ, ವಿರೋಧಿಗಳ ಬಗ್ಗೆ ಎಚ್ಚರಿಕೆ.

ಮೀನ: ಮಾಡುವ ಕೆಲಸದಲ್ಲಿ ವಿಳಂಬ, ರಾಜಕೀಯದವರಿಗೆ ತೊಂದರೆ, ಇಲ್ಲ ಸಲ್ಲದ ಅಪವಾದ, ನಂಬಿದ ಜನರಿಂದ ಮೋಸ, ಸಾಮಾನ್ಯ ನೆಮ್ಮದಿಗೆ ಧಕ್ಕೆ.

Share This Article
Leave a Comment

Leave a Reply

Your email address will not be published. Required fields are marked *