ದಿನ ಭವಿಷ್ಯ :11-04-2018

Public TV
1 Min Read

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ದಶಮಿ ಉಪರಿ ಏಕಾದಶಿ ತಿಥಿ
ಬುಧವಾರ, ಧನಿಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:27 ರಿಂದ 1:57
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:25
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:19

ಮೇಷ: ಬೆಲೆ ಬಾಳುವ ವಸ್ತುಗಳ ಖರೀದಿ, ವ್ಯಾಪಾರದಲ್ಲಿ ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ.

ವೃಷಭ: ಯತ್ನ ಕಾರ್ಯದಲ್ಲಿ ವಿಳಂಬ, ಕೃಷಿಯಲ್ಲಿ ಅಲ್ಪ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳಿಂದ ತೊಂದರೆ, ಪರರಿಂದ ಧನ ಸಹಾಯ.

ಮಿಥುನ: ಉತ್ತಮ ಬುದ್ಧಿಶಕ್ತಿ, ರಫ್ತು ಮಾರಾಟದವರಿಗೆ ಲಾಭ, ಪರಸ್ಥಳ ವಾಸ, ವೈಯುಕ್ತಿಕ ವಿಚಾರಗಳತ್ತ ಗಮನಹರಿಸಿ.

ಕಟಕ: ವ್ಯಾಪಾರದಲ್ಲಿ ಚೇತರಿಕೆ, ಮರಳಿ ಪ್ರಯತ್ನ ಮಾಡುವಿರಿ, ಬಂಧುಗಳಿಂದ ಸಹಾಯ, ಭೂ ವ್ಯವಹಾರದಲ್ಲಿ ಲಾಭ.

ಸಿಂಹ: ಕಾರ್ಯ ವೈಖರಿಯಲ್ಲಿ ವಿಳಂಬ, ತೀರ್ಥಯಾತ್ರೆ ದರ್ಶನ, ಅಧಿಕ ಖರ್ಚು, ಶತ್ರುಗಳ ಬಾಧೆ, ಕುಟುಂಬದಲ್ಲಿ ವಿರಸ, ದಾಂಪತ್ಯದಲ್ಲಿ ಕಲಹ.

ಕನ್ಯಾ: ಆತ್ಮೀಯರಿಂದ ಸಹಾಯ, ದೂರ ಪ್ರಯಾಣ, ವಾಹನ ಅಪಘಾತ, ಆರೋಗ್ಯದಲ್ಲಿ ಏರುಪೇರು, ಗೆಳೆಯರಿಂದ ಅನರ್ಥ. ಷೇರು ವ್ಯವಹಾರಗಳಲ್ಲಿ ನಷ್ಟ.

ತುಲಾ: ಅನ್ಯ ಜನರಲ್ಲಿ ವೈಮನಸ್ಸು, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ಸೇವಕರಿಂದ ತೊಂದರೆ, ವಿಪರೀತ ಖರ್ಚು.

ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ವೈಯುಕ್ತಿ ನಿಂದನೆ, ದ್ರವ್ಯ ನಷ್ಟ, ಸಾಲ ಬಾಧೆ, ಪಾಪ ಬುದ್ಧಿ, ಋಣ ಬಾಧೆ, ವಾಹನದಿಂದ ಲಾಭ.

ಧನಸ್ಸು: ದಾಯಾದಿಗಳ ಕಲಹ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಧನ ಲಾಭ, ಶತ್ರು ಭಯ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮಕರ: ರಿಯಲ್ ಎಸ್ಟೇಟ್‍ ನವರಿಗೆ ಲಾಭ, ಕುಟುಂಬದಲ್ಲಿ ನೆಮ್ಮದಿ, ಅಧಿಕ ತಿರುಗಾಟ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಮಾತಿನ ಚಕಮಕಿ.

ಕುಂಭ: ಮಾಡಿದ ಕೆಲಸಗಳಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಋಣ ವಿಮೋಚನೆ, ಬಂಧುಗಳಿಂದ ಸಹಾಯ, ಮಿಶ್ರ ಫಲ ಪ್ರಾಪ್ತಿ.

ಮೀನ: ಮಹಿಳೆಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಸಾಲ ಬಾಧೆ, ಧೈರ್ಯದಿಂದ ಕೆಲಸದಲ್ಲಿ ಮುನ್ನಡೆ.

Share This Article
Leave a Comment

Leave a Reply

Your email address will not be published. Required fields are marked *