ದಿನ ಭವಿಷ್ಯ: 28-08-2019

Public TV
1 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ಪುಷ್ಯ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:25 ರಿಂದ 1:58
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:25
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:19

ಮೇಷ: ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಬಾಕಿ ಹಣ ವಸೂಲಿ, ವಾಹನ ಖರೀದಿ ಯೋಗ, ಒಳ್ಳೆಯ ಅನುಕೂಲ, ಸುಖ ಭೋಜನ ಪ್ರಾಪ್ತಿ.

ವೃಷಭ: ಸಹೋದರರಿಂದ ಸಹಾಯ, ಹಣಕಾಸು ವಿಚಾರದ ಬಗ್ಗೆ ಎಚ್ಚರ, ಶತ್ರುಗಳ ಬಾಧೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ.

ಮಿಥುನ: ಮಾನಸಿಕ ವ್ಯಥೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ವಾಹನ ಅಪಘಾತ ಸಾಧ್ಯತೆ, ಸಣ್ಣ ಮಾತಿನಿಂದ ಕಲಹ.

ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ, ಸ್ಥಳ ಬದಲಾವಣೆ, ಅಧಿಕವಾದ ಖರ್ಚು.

ಸಿಂಹ: ಮಾತೃವಿನಿಂದ ಶುಭ ಹಾರೈಕೆ, ವಸ್ತ್ರಾಭರಣ ಖರೀದಿ, ಮಾತಿನಲ್ಲಿ ಹಿಡಿತ ಅಗತ್ಯ, ಅತಿಯಾದ ನೋವು.

ಕನ್ಯಾ: ನಂಬಿದ ಜನರಿಂದ ಮೋಸ-ಅಶಾಂತಿ, ರಾಜ ವಿರೋಧ, ಯತ್ನ ಕಾರ್ಯದಲ್ಲಿ ಭಂಗ, ಆರೋಗ್ಯದಲ್ಲಿ ಏರುಪೇರು, ವಿಪರೀತ ವ್ಯಸನ.

ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಕುಟುಂಬದಲ್ಲಿ ಪ್ರೀತಿ, ಮಿತ್ರರ ಭೇಟಿ, ಪ್ರವಾಸದಲ್ಲಿ ಮನಃಸ್ತಾಪ.

ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ, ಕೆಟ್ಟ ಮಾತುಗಳನ್ನಾಡುವಿರಿ.

ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಐಶ್ವರ್ಯ ವೃದ್ಧಿ, ಋಣ ವಿಮೋಚನೆ.

ಮಕರ: ಮಾನಸಿಕ ಚಿಂತೆ, ವಿವಾಹಕ್ಕೆ ಅಡಚಣೆ, ಸಾಲ ಮಾಡುವ ಪರಿಸ್ಥಿತಿ, ಉದ್ಯೋಗದಲ್ಲಿ ತೊಂದರೆ.

ಕುಂಭ: ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, ಮಾನಸಿಕ ನೆಮ್ಮದಿ.

ಮೀನ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಶತ್ರುಗಳ ಭಯ, ವಿದ್ಯಾರ್ಥಿಗಳಲ್ಲಿ ಆತಂಕ, ವಿದೇಶ ಪ್ರಯಾಣ, ಸುಖ ಭೋಜನ.

Share This Article
Leave a Comment

Leave a Reply

Your email address will not be published. Required fields are marked *