ದಿನ ಭವಿಷ್ಯ: 27-08-2019

Public TV
2 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಮಂಗಳವಾರ, ಪುನರ್ವಸು ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:31 ರಿಂದ 5:04
ಗುಳಿಕಕಾಲ: ಮಧ್ಯಾಹ್ನ 12:25 ರಿಂದ 1:58
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:52

ಮೇಷ: ಋಣ ವಿಮೋಚನೆ, ಕಾರ್ಯ ಸಾಧನೆಗಾಗಿ ತಿರುಗಾಟ, ಆರೋಗ್ಯದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಾಧ್ಯತೆ, ಅಲ್ಪ ಕಾರ್ಯ ಸಿದ್ಧಿ.

ವೃಷಭ: ಅನಾವಶ್ಯಕ ದುಂದು ವೆಚ್ಚ, ಕೃಷಿಯಲ್ಲಿ ನಷ್ಟ, ಮಾನಸಿಕ ಒತ್ತಡ, ದುಷ್ಟ ಚಿಂತನೆ, ಈ ದಿನ ಅಶುಭ ಫಲ.

ಮಿಥುನ: ವ್ಯಾಪಾರದಲ್ಲಿ ದೃಷ್ಟಿ ದೋಷ, ಗುರು ಹಿರಿಯರ ದರ್ಶನ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಿಗೆ ಆತಂಕ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.

ಕಟಕ: ಎಲ್ಲಿ ಹೋದರೂ ಅಶಾಂತಿ, ನೀವಾಡುವ ಮಾತಿನಿಂದ ಕಲಹ, ಪರಸ್ತ್ರೀಯಿಂದ ತೊಂದರೆ, ನೆಮ್ಮದಿ ಇಲ್ಲದ ದಿನ ನಿಮ್ಮದಾಗುವುದು.

ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಪರಸ್ಥಳ ವಾಸ, ಸೌಜನ್ಯದ ವರ್ತನೆ ಅಗತ್ಯ, ನಾನಾ ಆಲೋಚನೆಗಳಿಂದ ನಿದ್ರಾಭಂಗ.

ಕನ್ಯಾ: ಈ ದಿನ ಜಾಗ್ರತೆಯಲ್ಲಿರುವುದು ಉತ್ತಮ, ಕೆಲಸದಲ್ಲಿ ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಸುಖ ಭೋಜನ ಪ್ರಾಪ್ತಿ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯರ್ಥ ಧನಹಾನಿ, ಮಾನಸಿಕ ವ್ಯಥೆ, ಬೇಡದ ವಿಚಾರಗಳಿಂದ ದೂರ ಉಳಿಯಿರಿ, ಈ ದಿನ ಅಶುಭ ಫಲ.

ವೃಶ್ಚಿಕ: ಅಲ್ಪ ಕಾರ್ಯ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಮಾನಸಿಕ ವ್ಯಥೆ.

ಧನಸ್ಸು: ದಾಂಪತ್ಯದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ದೂರ ಪ್ರಯಾಣ, ವ್ಯಾಪಾರದಲ್ಲಿ ಮಂದಗತಿ, ಸ್ತ್ರೀಯರಿಗೆ ಲಾಭ.

ಮಕರ: ಮನೆಯಲ್ಲಿ ಸಂತಸ, ಪಾಪ ಕಾರ್ಯಗಳಿಗೆ ಪ್ರಚೋದನೆ, ಮಾನಸಿಕ ಅಸ್ಥಿರತೆ, ವಾಹನದಿಂದ ತೊಂದರೆ.

ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ, ವಿವಾದಗಳಿಂದ ದೂರ ಉಳಿಯುವುದು ಉತ್ತಮ, ಮಾಟ-ಮಂತ್ರದ ಭೀತಿ, ಅನಗತ್ಯ ವಿಚಾರಗಳಿಂದ ತೊಂದರೆ.

ಮೀನ: ಆಕಸ್ಮಿಕ ಧನ ಲಾಭ, ಕೃಷಿಯಲ್ಲಿ ಲಾಭ, ಚೋರ ಭಯ, ಅಧಿಕ ಕೋಪ, ವಿಪರೀತ ವ್ಯಸನ, ಹಿತ ಶತ್ರುಗಳ ಕಾಟ.

Share This Article
Leave a Comment

Leave a Reply

Your email address will not be published. Required fields are marked *