ದಿನ ಭವಿಷ್ಯ 18-9-2018

Public TV
1 Min Read

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಮಂಗಳವಾರ, ಮೂಲಾ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 3:19 ರಿಂದ 4:50
ಗುಳಿಕಕಾಲ: ಮಧ್ಯಾಹ್ನ 12:17 ರಿಂದ 1:48
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:46

ಮೇಷ: ವಿರೋಧಿಗಳಿಂದ ಕುತಂತ್ರ, ಗುಪ್ತಾಂಗ ರೋಗ ಬಾಧೆ, ಕೆಲಸದಲ್ಲಿ ಅಲ್ಪ ಪ್ರಗತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ದಾಂಪತ್ಯದಲ್ಲಿ ಪ್ರೀತಿ, ಅಭಿವೃದ್ಧಿ ಕುಂಠಿತ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಿತ್ರರಿಂದ ತೊಂದರೆ, ಮಾನಸಿಕ ವ್ಯಥೆ.

ಮಿಥುನ: ಮಕ್ಕಳಿಂದ ಸಹಾಯ, ಕೆಲಸದಲ್ಲಿ ಬದಲಾವಣೆ, ತಾಯಿಯಿಂದ ಬುದ್ಧಿ ಮಾತು, ಮನಸ್ಸಿನಲ್ಲಿ ಆತಂಕ.

ಕಟಕ: ಕ್ರಯ-ವಿಕ್ರಯಗಳಲ್ಲಿ ಲಾಭ, ಕೆಲಸದಲ್ಲಿ ಅಲ್ಪ ಲಾಭ, ದುಶ್ಚಟಗಳಿಗೆ ಹಣವ್ಯಯ, ಮನೆಯಲ್ಲಿ ಅಶಾಂತಿ, ವಾಹನ ಅಪಘಾತ.

ಸಿಂಹ: ಪರರ ಧನ ಪ್ರಾಪ್ತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಶುಭ, ಮಾತಿನ ಮೇಲೆ ಹಿಡಿತ ಅಗತ್ಯ.

ಕನ್ಯಾ: ಮಕ್ಕಳ ಅಗತ್ಯಕ್ಕೆ ಖರ್ಚು, ಗುರು ಹಿರಿಯರ ಭೇಟಿ, ಋಣ ಬಾಧೆ, ಶತ್ರುಗಳು ನಾಶ, ಮಾನಸಿಕವಾಗಿ ಧೈರ್ಯ ಕಳೆದುಕೊಳ್ಳುವಿರಿ.

ತುಲಾ: ದಾಯಾದಿಗಳ ಕಲಹ, ಪರಸ್ತ್ರೀಯಿಂದ ಸಹಾಯ, ಉನ್ನತ ಸ್ಥಾನ ಮಾನ ಪ್ರಾಪ್ತಿ, ಅನ್ಯ ಜನರಲ್ಲಿ ವೈಮನಸ್ಸು, ಕೈಕಾಲಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.

ವೃಶ್ಚಿಕ: ವ್ಯಾಪಾರದಲ್ಲಿ ಧನ ಲಾಭ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಅನಗತ್ಯ ನಿಂದನೆಗೊಳಗಾಗುವಿರಿ, ಅಕಾಲ ಭೋಜನ.

ಧನಸ್ಸು: ಯತ್ನ ಕಾರ್ಯದಲ್ಲಿ ವಿಘ್ನ, ನಯ ವಂಚಕರ ಮಾತಿಗೆ ಮರುಳಾಗಬೇಡಿ, ಹಿತ ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಪ್ರೀತಿ.

ಮಕರ: ಆತುರ ಸ್ವಭಾವದಿಂದ ಸಂಕಷ್ಟ, ಅವಕಾಶ ಕೈ ತಪ್ಪುವುದು, ಅತಿಯಾದ ಆತ್ಮವಿಶ್ವಾಸದಿಂದ ನಷ್ಟ, ಈ ದಿನ ತಾಳ್ಮೆ ಅತ್ಯಗತ್ಯ.

ಕುಂಭ: ಶುಭ ಸುದ್ದಿ ಕೇಳುವಿರಿ, ಕೃಷಿಯಲ್ಲಿ ನಷ್ಟ, ಅತಿಯಾದ ಕೋಪ, ಶತ್ರುಗಳ ಬಾಧೆ, ಕೆಲಸ ಕಾರ್ಯಗಳಲ್ಲಿ ನಿಧಾನ.

ಮೀನ: ಬಾಕಿ ಹಣ ವಸೂಲಿ, ದೂರ ಪ್ರಯಾಣ, ವಾಹನ ಖರೀದಿಯೋಗ, ಮಾನಸಿಕ ನೆಮ್ಮದಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಈ ದಿನ ವಿಶೇಷ ಲಾಭ.

Share This Article
Leave a Comment

Leave a Reply

Your email address will not be published. Required fields are marked *