ದಿನ ಭವಿಷ್ಯ: 18-07-2019

Public TV
1 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಗುರುವಾರ, ಶ್ರವಣ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:53
ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:41

ಮೇಷ: ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿಗಳ ಕಲಹ.

ವೃಷಭ: ಕುಟುಂಬದಲ್ಲಿ ಕಲಹ, ಮುಖ್ಯ ತೀರ್ಮಾನಗಳಲ್ಲಿ ಸಂಕಷ್ಟ, ಪತ್ರ ವ್ಯವಹಾರಗಳಿಂದ ತೊಂದರೆ, ಕೆಲಸದಲ್ಲಿ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ.

ಮಿಥುನ: ರೋಗ ಬಾಧೆ, ವಿಪರೀತ ಉಷ್ಣ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಸಮಸ್ಯೆ.

ಕಟಕ: ಕುಟುಂಬದಲ್ಲಿ ವಾಗ್ವಾದ, ದಾಂಪತ್ಯದಲ್ಲಿ ಅಶಾಂತಿ, ಮಕ್ಕಳಿಂದ ಮಾನಹಾನಿ, ಉದ್ಯೋಗ ನಷ್ಟ.

ಸಿಂಹ: ರೋಗ ಬಾಧೆ, ಆರೋಗ್ಯ ಸಮಸ್ಯೆ, ವಿಪರೀತ ಖರ್ಚು, ಕೆಲಸಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಒತ್ತಡ, ವ್ಯಾಪಾರದಲ್ಲಿ ನಷ್ಟ.

ಕನ್ಯಾ: ಮಿತ್ರರಿಂದ ಆಕಸ್ಮಿಕ ತೊಂದರೆ, ನಿಮ್ಮ ಭವಿಷ್ಯಕ್ಕೆ ಕಪ್ಪು ಚುಕ್ಕೆ, ದಾಯಾದಿಗಳಿಂದ ನಷ್ಟ, ಮಕ್ಕಳು ದೂರವಾಗುವರು.

ತುಲಾ: ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪ್ರಾಪ್ತಿ, ಮಾತೃವಿನೊಂದಿಗೆ ವಾಗ್ವಾದ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ವಿರಸ.

ವೃಶ್ಚಿಕ: ಕಾರ್ಮಿಕರ ಕೊರತೆಯಿಂದ ನಷ್ಟ, ಅಭಿವೃದ್ಧಿ ಕುಂಠಿತ, ಕುಟುಂಬದಲ್ಲಿ ಶತ್ರುತ್ವ, ಸ್ವಯಂಕೃತ್ಯಗಳಿಂದ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.

ಧನಸ್ಸು: ಕುಟುಂಬಕ್ಕಾಗಿ ಖರ್ಚು, ಆಕಸ್ಮಿಕ ವಿಪರೀತ ವೆಚ್ಚ, ಪ್ರೇಮ ವಿಚಾರದಲ್ಲಿ ಕಲಹ, ದೇಹದಲ್ಲಿ ಆಲಸ್ಯ, ಹಣಕಾಸು ವಂಚನೆ.

ಮಕರ: ಪಿತ್ರಾರ್ಜಿತ ಆಸ್ತಿ ತಗಾದೆ, ದಾಂಪತ್ಯದಲ್ಲಿ ಕಲಹ, ಆತುರ ಸ್ವಭಾವ, ಮಿತ್ರರನ್ನು ದೂರ ಮಾಡಿಕೊಳ್ಳುವಿರಿ, ಅಧಿಕವಾದ ಕೋಪ, ಅಹಂಭಾವ ಹೆಚ್ಚಾಗುವುದು.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸೇವಕರಿಂದ ಖರ್ಚು, ಕೋರ್ಟ್ ಕೇಸ್‍ಗಳಲ್ಲಿ ಜಯ, ದೂರ ಪ್ರದೇಶದಲ್ಲಿ ಉದ್ಯೋಗ.

ಮೀನ: ಗಂಡು ಮಕ್ಕಳಿಂದ ಧನಾಗಮನ, ಉದ್ಯೋಗ ಬಡ್ತಿಗೆ ಅವಕಾಶ, ತಂದೆಯಿಂದ ಲಾಭ, ಈ ದಿನ ಶುಭ ಫಲ.

Share This Article
Leave a Comment

Leave a Reply

Your email address will not be published. Required fields are marked *