ದಿನ ಭವಿಷ್ಯ: 18-06-2019

Public TV
1 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಮಂಗಳವಾರ, ಮೂಲಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:37 ರಿಂದ 5:13
ಗುಳಿಕಕಾಲ: ಮಧ್ಯಾಹ್ನ 12:24 ರಿಂದ 2:01
ಯಮಗಂಡಕಾಲ: ಬೆಳಗ್ಗೆ 9:12 ರಿಂದ 10:48

ಮೇಷ: ಕುಟುಂಬ ಸೌಖ್ಯ, ನೂತನ ಉದ್ಯೋಗ ಪ್ರಾಪ್ತಿ, ತೀರ್ಥಯಾತ್ರೆ ದರ್ಶನ, ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಋಣ ಬಾಧೆ, ಯತ್ನ ಕಾರ್ಯದಲ್ಲಿ ಜಯ, ರೋಗ ಬಾಧೆ, ಹಿತ ಶತ್ರುಗಳಿಂದ ತೊಂದರೆ.

ಮಿಥುನ: ವೈಯುಕ್ತಿ ಕೆಲಸಗಳಲ್ಲಿ ಭಾಗಿ, ಹಣಕಾಸು ವಿಚಾರಗಳಲ್ಲಿ ಎಚ್ಚರ, ಹಿರಿಯರ ಆಗಮನ, ಆರೋಗ್ಯದಲ್ಲಿ ಏರುಪೇರು.

ಕಟಕ: ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಕಳವಾದ ವಸ್ತುಗಳು ಕೈ ಸೇರುವುದು, ಆಪ್ತರ ಮಗನ ವಿದ್ಯಾಭ್ಯಾಸಕ್ಕೆ ನೆರವು, ಕೆಲಸ ಕಾರ್ಯಗಳಲ್ಲಿ ನಿಧಾನ.

ಸಿಂಹ: ವಾಹನ ಲಾಭ, ಆಲೋಚಿಸಿ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಶರೀರದಲ್ಲಿ ತಳಮಳ, ಮಾನಸಿಕ ವೇದನೆ.

ಕನ್ಯಾ: ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅಧಿಕವಾದ ಖರ್ಚು, ದುಷ್ಟರ ಸಹವಾಸದಿಂದ ತೊಂದರೆ, ಅಪರಿಚಿತರಿಂದ ಎಚ್ಚರಿಕೆ.

ತುಲಾ: ಹೊಸ ಕೆಲಸ ಕಾರ್ಯಗಳಲ್ಲಿ ಅವಕಾಶ ಪ್ರಾಪ್ತಿ, ದೇವರ ಕೃಪೆಗೆ ಪಾತ್ರರಾಗುವಿರಿ, ಶುಭ ಫಲ ಲಭಿಸುವುದು, ಮಾನಸಿಕ ನೆಮ್ಮದಿ.

ವೃಶ್ಚಿಕ: ಕುಟುಂಬ ಸದಸ್ಯರಿಂದ ಸಹಾಯ, ಸುಖ ಭೋಜನ ಪ್ರಾಪ್ತಿ, ವ್ಯಾಪಾರದಲ್ಲಿ ಲಾಭ, ಶತ್ರುಗಳ ನಾಶ, ರೋಗ ಬಾಧೆ.

ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ಸಂಪಾದನೆಯನ್ನು ಇತರರಿಗೆ ದಾನ ಮಾಡುವಿರಿ, ಮಾನಸಿಕ ನೆಮ್ಮದಿಗಾಗಿ ಪರಿಶ್ರಮ, ಅಷ್ಟೈಶ್ವರ್ಯ ಇದ್ರೂ ಆಲೋಚನೆ.

ಮಕರ: ಮಕ್ಕಳ ಪ್ರಗತಿಯಿಂದ ಸಂತಸ, ಇಷ್ಟಾರ್ಥ ಸಿದ್ಧಿಸುವುದು, ಸುಖ ಭೋಜನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

ಕುಂಭ: ವಿದ್ಯಾರ್ಥಿಗಳಲ್ಲಿ ಗೊಂದಲ, ನೀವಾಡುವ ಮಾತಿನಲ್ಲಿ ಎಚ್ಚರ, ಮಾನಸಿಕ ವ್ಯಥೆ, ವಿವಿಧ ಮೂಲಗಳಿಂದ ಹಣಕಾಸು ಲಭಿಸುವುದು.

ಮೀನ: ಸ್ತ್ರೀಯರಿಗೆ ಅನುಕೂಲ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನ್ಯ ಜನರಲ್ಲಿ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ತಿರುಗಾಟ, ಹೊಸ ಪ್ರಯತ್ನದಿಂದ ಜಯ.

Share This Article
Leave a Comment

Leave a Reply

Your email address will not be published. Required fields are marked *